Saturday, January 17, 2009

ಅವರು ಸಾವನ್ನೇ ಕೂಗಿ ಕರೆದರು!!

ಯಾರು ತಮ್ಮ ಸಾವನ್ನು ತಾವೇ ಹುಡುಕಿ ಹೋಗುತ್ತಾರೆ? ಆದರೆ ಕಳೆದವಾರ ಮುಂಬೈ ಮಾರಣ ಹೋಮದಲ್ಲಿ ಸಾವನ್ನು ಹುಡುಕಿಕೊಂಡು ಹೋದ ವೀರ ಪೋಲಿಸ್ ಅಧಿಕಾರಿಯ ಕತೆಯಿದು.

ಮುಂಬೈ ಮೂಲದ ಆಂಗ್ಲ ಪತ್ರಿಕೆಯೊಂದರಲ್ಲಿ ಬಂದಿದ್ದ ಮಾಹಿತಿಯಿದು, ಆ ವೀರನ ಬಗ್ಗೆ ಎಲ್ಲರಿಗೂ ತಿಳಿಯಲಿ ಎಂಬ ಉದ್ದೇಶದಿಂದ ಇಲ್ಲಿ ಬರೆಯುತಿದ್ದೇನೆ.

ಸುತ್ತಲೂ ಕಗ್ಗತ್ತಲು, ಬೀದಿ ಬದಿಯ ದೀಪವೂ ಅಲ್ಲಿರಲಿಲ್ಲ. ಅದೇ ಜಾಗದಲ್ಲಿ ಕೈಯಲ್ಲಿ ರೈಫಲ್ ಹಿಡಿದು ಪಹರೆ ಕಾಯುತಿದ್ದವರು ಮುಂಬೈನ ಪೋಲಿಸ್ ಸಬ್-ಇನ್ಸ್ಪೆಕ್ಟರ್ ಬಾಪುರಾವ್ ದುರ್ಗುಡೆ. ಅವರಿಗೆ ಕಳೆದ ಬುಧವಾರ ಉಗ್ರರ ದಾಳಿಗೆ ತುತ್ತಾಗಿದ್ದ 'ಕಾಮ ಆಸ್ಪತ್ರೆ'ಯ ಬಳಿಯಿರುವ 'St Xavier’s' ಕಾಲೇಜ್ನ ಬಳಿ ಕರ್ತವ್ಯ ನಿರ್ವಹಿಸುವಂತೆ ಹಾಗೂ ಕಾಮ ಆಸ್ಪತ್ರೆಯ ಕಡೆ ಸಾರ್ವಜನಿಕರು ಬರದಂತೆ ತಡೆಯಲು ಆದೇಶ ಬಂದಿತ್ತು.

ಅವರು ನೋಡುತಿದ್ದಂತೆ ಇಬ್ಬರು ಕಾಲೇಜ್ ವಿದ್ಯಾರ್ಥಿಗಳಂತೆ ಕಾಣುವ ಯುವಕರು ಕಾಮ ಆಸ್ಪತ್ರೆ ಬಳಿ ಹೊರಟಿದ್ದರು, ದುರ್ಗುಡೆ ಯುವಕರನ್ನು ಎಚ್ಚರಿಸಲು "ಕಾಮ ಆಸ್ಪತ್ರೆ ಬಳಿ ಉಗ್ರರ ದಾಳಿಯಾಗಿದೆ, ಗುಂಡಿನ ದಾಳಿ ನಡೆಯುತ್ತಿದೆ, ಅತ್ತ ಹೋಗಬೇಡಿ" ಎಂದು ಕೂಗಿ ಹೇಳಿದರು. ಆದರೆ ಆ ಯುವಕರು ಒಮ್ಮೆ ದುರ್ಗುಡೆಯವರನ್ನು ನೋಡಿ ಮುಂದಡಿಯಿಟ್ಟರು.

ಬಹುಷಃ ಯುವಕರಿಗೆ ಹೇಳಿದ್ದು ಸರಿಯಾಗಿ ಕೇಳಿಲ್ಲ ಎಂದು ತಿಳಿದು, ಅವರತ್ತ ಹೆಜ್ಜೆಯಿಡಲು ಶುರು ಮಾಡಿದರು.

ಅವರ ಸನಿಹ ತೆರಳಿ ಅಡ್ಡಗಟ್ಟುವಷ್ಟರಲ್ಲಿ ಯುವಕನ ಕೈಯಲ್ಲಿದ್ದ AK47 ಬಾಯ್ತೆರೆದಿತ್ತು. ನಾನು ತಡೆದಿರುವುದು ಉಗ್ರರನ್ನು ಎಂದು ದುರ್ಗುಡೆಯವರಿಗೆ ತಿಳಿದು ರೈಫಲ್ ತೆಗೆಯುವಷ್ಟರಲ್ಲಿ ತೋರಿ ಬಂದ ಬುಲೆಟ್ ಅವರ ಎದೆಗೆ ನಾಟಿತ್ತು.

ಪ್ರಾಣ ಉಳಿಸಲು ಹೋದವನ ಪ್ರಾಣವನ್ನೇ ತೆಗೆದರು ಉಗ್ರರು.
ಆ ವೀರ ಯೋಧನಿಗೊಂದು ನುಡಿ ನಮನ.

ಪನ್ನೀರೋ.. ಕಣ್ಣೀರೋ..

ಸಪ್ತಪದಿ ತುಳಿಯಲು ಹೊರಟ
ಗೆಳತಿಯ ನೋಡಲು ಹೋಗಿದ್ದೆ
ನಾ ಸಪ್ತರ್ಷಿ ಕಲ್ಯಾಣ ಮಂದಿರಕ್ಕೆ

ಸಪ್ತ ಸ್ವರಗಳ ಹಿಮ್ಮೇಳ ಮೊಳಗುತಿದ್ದ
ಕಲ್ಯಾಣ ಮಂದಿರದೊಳಗೆ ಕಾಲಿಡುತಿದ್ದಂತೆ
'ಪನ್ನೀರ ಸ್ವಾಗತ' ಕೋರಲು ನಿಂತಿದ್ದ
ಅವಳ ನೋಡಿದೆ, ಆಹಾ! ಜಗತ್ ಸುಂದರಿಯವಳು

ನಾ ಕೊಟ್ಟ ನಗೆ ಮಲ್ಲಿಗೆಯ ಮುಡಿದವಳಿಗೆ
ಬೆಳ್ಳಿ ಕಾಲುಂಗುರವ ತೊಡಿಸಿ,ನನ್ನ
ಹೃದಯದ ಮನೆಗೆ ಸ್ವಾಗತಿಸಲೇ
ಪ್ರೀತಿಯ ಅರಮನೆಗೆ ಮಹಾರಾಣಿ ಮಾಡಲೇ
ಎಂದು ಮನದಲ್ಲಿ ಅಂದು ಕೊಂಡಾಗಲೇ

ಅವಳ ಪಕ್ಕ ನಿಂತಿದ್ದ ಮುದ್ದಾದ ಮಗು
ಹೇಳಿತು ಮುತ್ತಿನಂತ ಮಾತೊಂದು
"ಅಮ್ಮಾ, ಅಮ್ಮಾ ಅಂಕಲ್ಗೆ ನಾನು
ಪನ್ನೀರು ಹಾಕ್ತೀನಿ ಕೊಡಮ್ಮಾ!!! "

-- ರಾಕೇಶ್ ಶೆಟ್ಟಿ Laughing out loud

ಚಾ ಚಾ ನೆಹರೂ,ಚೀನಿ ಭಾಯಿ ಹಾಗೂ ಚರಮ ಗೀತೆ!!!

"ಮನುಷ್ಯ ಸುಖವಾಗಿರುವಾಗ ದೇವರು , ಡಾಕ್ಟರ್ ಹಾಗು ಯೋಧರನ್ನು ಮರೆತುಬಿದುತ್ತಾನೆ" ಅಂತ ಮೊನ್ನೆ ರೇಡಿಯೋದಲ್ಲಿ ರವಿ ಬೆಳಗೆರೆ ಹೇಳುತ್ತಿದ್ದರು. ಅವರಿಗೆ ಈ ಮಾತನ್ನು ಹೇಳಿದ್ದು ಕಾರ್ಗಿಲ್ ಸಮರದಲ್ಲಿ ವೀರ ಮರಣವನ್ನಪ್ಪಿದ 'ಪುರುಷೋತ್ತಮ್' ಎಂಬವರು.
ಈ ದಿನ ಅಂತ ವೀರ ಯೋಧರ ನೆನಪಿಗಾಗಿ ಈ ಲೇಖನ. ಅಂದ ಹಾಗೆ ವೀರ ಯೋಧರ ನೆನಪಾಗಲು ಕಾರಣವೇನು ಗೊತ್ತೇ, 'ಮಕ್ಕಳ ದಿನಾಚರಣೆ'.

ಮಕ್ಕಳ ದಿನಾಚರಣೆ ಎಂದರೆ ತಟ್ಟನೆ ನೆನಪಿಗೆ ಬರುವವರು ಚಾ ಚಾ ನೆಹರು. ಅವರ ಹುಟ್ಟು ಹಬ್ಬವನ್ನು ತಾನೆ ನಾವು ಮಕ್ಕಳ ದಿನಾಚರಣೆ ಎಂದು ಆಚರಿಸುವುದು. ಮಕ್ಕಳಿಗೆ ಚಾ ಚಾ ನ ಬಗ್ಗೆ ಕೇಳಿ, "ಅವರು ಭಾರತದ ಮೊದಲ ಪ್ರಧಾನ ಮಂತ್ರಿ, ಮಹಾನ್ ಸ್ವಾತಂತ್ರ್ಯ ಹೋರಾಟಗಾರ, ಅವರಿಗೆ ಮಕ್ಕಳು ಹಾಗು ಕೆಂಪು ಗುಲಾಬಿ ಎಂದರೆ ಬಹಳ ಇಷ್ಟ " ಈ ರೀತಿ ಉತ್ತರ ಬರುತ್ತದೆ.
ಆದರೆ ಇಂದು ರೇಡಿಯೋದಲ್ಲಿ ಈ ಮಕ್ಕಳ ದಿನಾಚರಣೆ ಅಂಗವಾಗಿ ಮಾತನಾಡುವಾಗ ನನಗೆ ನೆನಪಾಗಿದ್ದು , ಇಂದಿಗೆ ೪೬ ವರ್ಷಗಳ ಹಿಂದೆ ನಡೆದ ಒಂದು ಘಟನೆ, ಅದು ಭಾರತೀಯರಿಗೆ ಹಾಗು ಭಾರತಕ್ಕೆ ಮರೆಯಲಾಗದಂತಹ ಕರಾಳ ನೆನಪು ತರುವಂತದ್ದು. ಹೌದು ನಾನು ಹೇಳುತ್ತಿರುವುದು ೧೯೬೨ರಲ್ಲಿ ನಡೆದ ಭಾರತ ಚೀನಾ ಯುದ್ಧದ ಬಗ್ಗೆ. ಅದರ ಬಗ್ಗೆಯೇ ಇಲ್ಲಿ ಬರೆದಿದ್ದೇನೆ.
ಈ ಲೇಖನಕ್ಕೆ ಮೂಲ ಆಧಾರ "ಹಿಮಾಲಯನ್ ಬ್ಲಂಡರ್" ಎಂಬ ಹೊತ್ತಿಗೆ "ಬ್ರಿಗೇಡಿಯರ್ ಜಾನ್.ಪಿ ದಳವಿ" ಅವರು ಬರೆದಿದ್ದು , ಅದನ್ನು ರವಿ ಬೆಳಗೆರೆಯವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಆ ಘಟನೆಗಳನ್ನು ನನಗೆ ಅನ್ನಿಸಿದ ರೀತಿಯಲ್ಲಿ ನಿಮ್ಮ ಮುಂದಿಡುತ್ತಿದ್ದೇನೆ. ಓದಿ ಕೊಳ್ಳಿ.

ತಣ್ಣಗೆ ಕೊರೆಯುತ್ತಿರುವ ಚಳಿ, ಕಣ್ಣರಳಿಸಿದಷ್ಟು ದೂರ ಕಾಣುವ ಬೆಳ್ಳ ಬಿಳುಪಿನ ಮಂಜು, ಧರಿಸಿರುವ ತೆಳ್ಳನೆ ಕಾಟನ್ ಶಿರ್ಟನ್ನು ಸೀಳಿ ಹೊಳ ನುಗ್ಗುತ್ತಿರುವ ಹಿಮಗಾಳಿಗೆ ಜೀವ ಹಿಂಡಿದಂತಾಗುತ್ತಿದೆ , 'ಶೂ' ಗಳು ಹಳೆಯದಾಗಿ ತಳ ಸವೆದಿದೆ, ಫಳ ಫಳಿಸುವ ಸೂರ್ಯನ ಏನಾದರು ಕಣ್ಣು ಬಿಟ್ಟನೆಂದರೆ ಅಷ್ಟೆ , ಬೆಳಕಿನ ಪ್ರತಿಫಲನದಿಂದ 'ಲುಂಫೋ 'ದ ತುತ್ತ ತುದಿಯಲ್ಲಿ ನಿಂತು 'ಭಾರತ ಮಾತೆ'ಯ ರಕ್ಷಣೆ ಮಾಡುತ್ತಿರುವ ವೀರ ಯೋಧನ ಕಣ್ಣೆ ಶಾಶ್ವತವಾಗಿ ಕುರುಡಾಗುತ್ತವೆ.ಆದರು ಅವನು ಛಲ ಬಿಟ್ಟಿಲ್ಲ, ತಾಯ್ನೆಲದ ರಕ್ಷಣೆಗೆ ಟೊಂಕಕಟ್ಟಿ ನಿಂತವನ ಮೈ ಮುಚ್ಚಲು ಸರಿಯಾದ ಬಟ್ಟೆಗಳಿಲ್ಲ.

ಹೌದು, ಅದು ಅಕ್ಟೋಬರ್ ತಿಂಗಳು ೧೯೬೨ನೆ ಇಸವಿ. ಅತ್ತ ದೂರದ 'ಲುಂಫೋ'ದಲ್ಲಿ 'ಭರತ ಮಾತೆ'ಯ ವೀರ ಪುತ್ರ ಚಳಿ ಮಳೆಯಿಂದ ತನ್ನನ್ನು ರಕ್ಷಿಸಿಕೊಳ್ಳಲು ಸರಿಯಾದ ವ್ಯವಸ್ಥೆಯಿಲ್ಲದೆ, ಯಾರು ಇಲ್ಲದಂತಹ ನಿರ್ಜನ ಪ್ರದೇಶದಲ್ಲಿ ಅರೆಬೇತ್ತಲೆಯಾಗಿ ನಿಂತಿದ್ದಾರೆ,
ಇತ್ತ ದೂರದ 'ದೆಹಲಿ'ಯಲ್ಲಿ ಭವ್ಯವಾದ ಹವಾ ನಿಯಂತ್ರಿತ ಕೋಣೆಯಲ್ಲಿ ಗರಿ ಗರಿ ಇಸ್ತ್ರಿ ಮಾಡಿದ ಬಟ್ಟೆ, ಎಡಗೈನಲ್ಲಿ 'ಕೆಂಪು ಗುಲಾಬಿ' (ಪ್ರೀತಿಯ ಸಂಕೇತ) , ಬಲಗೈನಲ್ಲೊಂದು 'ಬಿಳಿ ಪಾರಿವಾಳ' (ಶಾಂತಿಯ ಸಂಕೇತ') ಹಿಡಿದು ನಿಂತಿದ್ದರು 'ಚಾ ಚಾ ನೆಹರು'!

ಭಾರತ-ಚೀನಾ ಯುದ್ಧ ಶುರುವಾಗಿದೆ, ನಮ್ಮ ಬಳಿ ಯೋಧರ ಸಂಖೆಯು ಕಡಿಮೆ, ಇದ್ದ ಧೀರ ಯೋಧರ ಬಳಿ ಬಟ್ಟೆ ,ಶೂ ,ಬಂದೂಕು, ಬಾಂಬೂ, ಕಾಡತೂಸು, ಕಡೆಗೆ 'ಆಹಾರ'ವು ಸರಿಯಾಗಿ ಇರಲಿಲ್ಲ.
ಆದರೆ ಇದಾವುದರ ಪರಿವೆ ಇಲ್ಲದವರಂತೆ 'ಚಾ ಚಾ ನೆಹರು' ಮೃಷ್ಟಾನ್ನ ಭೋಜನವನ್ನು ಮುಗಿಸಿ , ವಿಮಾನವೇರಿ 'ಇಂಗ್ಲೆಂಡ್,ನೈಜೀರಿಯ,ಶ್ರೀಲಂಖ'ದಲ್ಲಿ 'ಶಾಂತಿ' ಸಂದೇಶ ಸಾರಲು ಹೊರಟಿದ್ದರು. ಇಲ್ಲಿ ಭಾರತ ಚೀನಿ ಶತ್ರುಗಳ ಕೈಯಲ್ಲಿ ಸಿಕ್ಕಿ ನಲುಗುತ್ತಿದ್ದಾರೆ, ನಮ್ಮ 'so called' ಸ್ವಾತಂತ್ರ್ಯ ಹೋರಾಟಗಾರ ಪ್ರಪಂಚ ಪರ್ಯಟನೆ ಮಾಡುತ್ತಿದ್ದರು.

'ಕೃಷ್ಣನ್ ಮೆನನ್' ಎಂಬ ಒಬ್ಬ ರಕ್ಷಣಾ ಸಚಿವ, ದೇಶದ ರಕ್ಷಣೆಗೆ ಬಗ್ಗೆ ಯೋಚಿಸಬೇಕಾದವ 'ಚಾ ಚಾ'ನೊಂದಿಗೆ ವಿದೇಶ ಪ್ರಯಾಣ ಮಾಡುತ್ತಿದ್ದರು. ಜನರಲ್ ತೋಪರ್ ದಿಲ್ಲಿಯಲ್ಲಿ ಮಲಗಿದ್ದರೆ, ಜನರಲ್ ಕೌಲ ಸಂಸಾರ ಸಮೇತ ಕಾಶ್ಮೀರದಲ್ಲಿ ರಜೆಯಲ್ಲಿದ್ದ.

ಹೀಗೆ 'ಚಾ ಚಾ ನೆಹರು' ಎಂಬ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಹಾಗು ಇತರೆ ಮೂವರು ಸೇರಿಕೊಂಡು ಅಖಂಡ ಭಾರತವನ್ನು ಚಿನಿಗಳ ಪಾದದ ಬಳಿ ಇಟ್ಟುಬಿಟ್ಟರು.

ಅಂದು ಚಾ ಚಾ ನೆಹರುರವರ ಹುಚ್ಚಾಟಕ್ಕೆ ಬಲಿಯಾದವರ ಸಂಖ್ಯೆ ಹತ್ತಿರ ೩-೪ ಸಾವಿರದಷ್ಟು. ಆ ವೀರ ಯೋಧರ ತಂದೆ,ತಾಯಿ,ಹೆಂಡತಿ,ಮಕ್ಕಳು,ಅನ್ನ,ಅಕ್ಕ,ತಮ್ಮಂದಿರ ಗೋಳು ಸಹ ಬಹುಷಃ ಭಾರತ ರತ್ನ ಚಾ ಚಾರಿಗೆ ಕೇಳಲೇ ಇಲ್ಲ. ಅವರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಾಂಧಿಜಿಯವರ ನಂತರದ 'ಶಾಂತಿ ದೂತ'ಎನಿಸಿಕೊಳ್ಳುವ ಹುಚ್ಚು ಹಂಬಲವಿತ್ತೆನೂ,
ಅದೇ ಕಾರಣದಿಂದಾಗಿ ಇಂದಿಗೂ 'ಕಾಶ್ಮೀರ' ಸಮಸ್ಯೆ ಎಂಬ ಭೂತ ಬೆಂಬಿಡದೆ ನಮ್ಮನ್ನು ಕಾಡುತ್ತಿದೆ. ೧೯೪೯ರಲ್ಲಿ ನಡೆದ 'ಭಾರತ-ಪಾಕಿಸ್ತಾನ' ಯುದ್ಧದಲ್ಲಿ ನಮ್ಮ ಸೈನಿಕರನ್ನು ಚಾ ಚಾ ತಡೆಯದಿದ್ದರೆ ಇವತ್ತಿಗೆ 'ಕಾಶ್ಮೀರ ಕಣಿವೆ' ಭಾರತ ಮಾತೆಯ ಕೀರೆಟವಾಗಿ ಮೆರೆಯುತಿತ್ತು. ಬಹುಷಃ ಈಗ ಕಾಡುತ್ತಿರುವ ಭಯೋತ್ಪಾದನೆ ಎಂಬ ಭೂತವು ಇರುತ್ತಿರಲಿಲ್ಲ. ಆದರೆ ಚಾ ಚಾ ರಕ್ತ ಪಾತ ಬೇಡ,ಇದನ್ನು ವಿಶ್ವ ಸಂಸ್ಥೆಗೆ ಕೊಂಡೊಯ್ದ ನಾನೇ ಪರಿಹರಿಸುವೆ ಅಂತ ಹೇಳುತ್ತಾ , ನಮ್ಮ ನಮ್ಮ ನಡುವಿನ ವಿಷಯವನ್ನು ಅಂತರರಾಷ್ಟ್ರೀಯ ವಿಷಯವನ್ನಾಗಿ ಮಾಡಿದರು. ಅವರು ಅಂದು ಮಾಡಿದ ತಪ್ಪಿನಿಂದಾಗಿ ಇಂದು ೨ ಶತ್ರು ರಾಷ್ಟ್ರಗಳು ಬಲಿತು ಕುಂತಿವೆ, ಅದು ಅಣ್ವಸ್ತ್ರದೊಂದಿಗೆ ನೆನಪಿರಲಿ.

ಅಂದು ಚೀನಾ 'ಟಿಬೆಟ್' ಅನ್ನು ವಶಪಡಿಸಿಕೊಂಡಾಗ ಇಡಿ ವಿಶ್ವವೇ ಅವರ ವಿರುದ್ಧ ತಿರುಗಿ ಬಿದ್ದಿತ್ತು, ಕೇವಲ 'ಚಾ ಚಾ ನೆಹರುವಿನ ಭಾರತ'ವೊಂದನ್ನು ಬಿಟ್ಟು. ಟಿಬೆಟ್ನ ಸ್ವಾತಂತ್ರ್ಯ ಹೋರಾಟಗಾರರು ಹೊರಜಗತ್ತಿನ ಬೆಂಬಲಕ್ಕೆ ಅಂಗಲಾಚುತಿದ್ದರು, ಇತ್ತ ವಿಶ್ವ ಸಂಸ್ಥೆಯಲ್ಲಿ 'ಚೀನಾ-ಟಿಬೆಟ್' ನ ವಿಷಯ ಪ್ರಸ್ತಾಪವಾದಗಳೆಲ್ಲ ಚೀನಾದ ಪರವಹಿಸಿದ್ದು 'ಚಾ ಚಾ ನೆಹರು'. ಅದು ಅವರಿಬ್ಬರ ಆಂತರಿಕ ವಿಷಯ ಅದರಲ್ಲಿ ನಾವು ತಲೆ ಹಾಕುವುದು ಬೇಡ ಅಂತ ಬೋಧನೆ ಮಾಡಿದ್ದು ಇದೆ ಚಾ ಚಾ.

ಬಹುಷಃ ಕಾಮನ್ ಸೆನ್ಸ್ ಇರುವಂತ ಮನುಷ್ಯನಿಗೆ ತಿಳಿಯಬಹುದಾದ ವಿಷಯವೇನೆಂದರೆ ಚೀನಾ ಟಿಬೆಟ್ ಅನ್ನು ಭಾರತದ ಮೇಲೆ ಸವಾರಿ ಮಾಡಲು ರಹದಾರಿಯಾಗಿ ಬಳಸುತ್ತದೆ ಎಂದು, ಅದು ನಮ್ಮ ಮುತ್ಸದ್ದಿಗೆ ತಿಳಿಯಲೇ ಇಲ್ಲ.
ಇಂದು ಅದೇ ಚೀನಾ ವಿಶ್ವ ಸಂಸ್ಥೆಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವ ಕೊಡುವುದನ್ನು ವಿರೋಧಿಸುತ್ತಿದೆ, ಅಮೇರಿಕಾದೊಂದಿಗಿನ ಅಣ್ವಸ್ತ್ರ ಒಪ್ಪಂದಕ್ಕೆ ಅಡ್ಡಿಪದಿಸುತ್ತದೆ.

ತಪ್ಪು ಮಾಡಿದ್ದು ಅವರು ಅನುಭವಿಸಬೇಕಾದವರು ನಾವು. ಇದೆಲ್ಲಿಯ ನ್ಯಾಯ ಚಾ ಚಾ???

ಅವಳ ಕಣ್ಣು

ದೂರದಿಂದಲೇ ಸೆಳೆದಿದ್ದವು ನನ್ನನ್ನು
ಅವಳ ಚೆಲುವ ನೀಲಿ ಕಣ್ಣುಗಳು.
ನೋಡು ನೋಡುತಿದ್ದಂತೆ ಬಂದೆ ಬಿಟ್ಟಳು ಹತ್ತಿರ
ಅವಳ ನೋಡಿದ ನನ್ನಲ್ಲಿ ಇರಲಿಲ್ಲ ಯಾವುದೇ ಉತ್ತರ.
ಮರುಕ್ಷಣವೇ ಏನೋ ಕಳೆದುಕೊಂಡ ಅನುಭವ ಮನದಲ್ಲಿ,
ಕಾಣೆಯಾಗಿದ್ದು ನನ್ನ 'ಪ್ರೀತಿಯ ಹೃದಯ'ವಾ ?
ಎಂದು ಯೋಚಿಸುವಷ್ಟರಲ್ಲಿ ಬಂದೆ ಬಿಟ್ಟಿತ್ತು ನನ್ನ ನಿಲ್ದಾಣ
ಇಳಿದು ಜೇಬು ತಡವಿದಾಗಲೇ ತಿಳಿದದ್ದು
ಆ ಹುಡುಗೀ ಕದ್ದದ್ದು 'ಪ್ರೀತಿಯ ಹೃದಯ' ಅಲ್ಲ
ನನ್ನ 'ಪ್ರೀತಿಯ ಪರ್ಸ್' ಎಂದು!!!

- ರಾಕೇಶ್ ಶೆಟ್ಟಿ Smiling

Wednesday, December 3, 2008

ಉಗ್ರರಿಂದ ಬಂದ ಬುಲೆಟ್ ಎದುರಿಗಿದ್ದವನ ಧರ್ಮ ಕೇಳಿ ಒಳ ನುಗ್ಗಿತ್ತಾ?

"ಸಾಮಾನ್ಯವಾಗಿ ಎಲ್ಲರೂ ಬದುಕಿ ಸಾಯುತ್ತಾರೆ, ಆದರೆ ಇವರು ಸತ್ತು ಬದುಕಿದ್ದಾರೆ"
ಈ ಮಾತನ್ನು ನಾನು ಹೇಳಿದ್ದು, ನಿನ್ನೆ ಭಾರತವನ್ನು ಬೆಚ್ಚಿ ಬೀಳಿಸಿದ ಮುಂಬೈನ ಮಾರಣ ಹೋಮದಲ್ಲಿ ವೀರ ಮರಣವನ್ನಪ್ಪಿದ, ನಮ್ಮ ನಾಳೆಗಳಿಗೆ ಅವರ ಅಮೂಲ್ಯ ಜೀವವನ್ನು ಮುಡಿಪಿಟ್ಟು ಹುತಾತ್ಮರಾದ 'ಹೇಮಂತ್ ಕರ್ಕರೆ, ವಿಜಯ್ ಸಾಲಸ್ಕರ್, ಅಶೋಕ್ ಆಪ್ಟೆ ಹಾಗೂ ಪೋಲಿಸ್ ಮತ್ತು ವೀರ ಯೋಧ'ರ ಬಗ್ಗೆ.

ಮುಂಬೈ ಮಾರಣ ಹೋಮದ ವಿಷಯ ತಿಳಿದು ಒಂದು ಕ್ಷಣ ಬೆಚ್ಚಿ ಬಿದ್ದೆ, ಎಲ್ಲೆಲ್ಲೂ ಕೇಳಿ ಬಂದ ಸುದ್ದಿ ಮುಂಬೈನ ಬಗ್ಗೆಯೇ. ಆದರೆ ಅದಕ್ಕಿಂತ ಹಿಂಸೆ ಎನಿಸಿದ್ದು ಅಲ್ಲೂ ಧರ್ಮದ ವಿಷಯ ಇಣುಕಿ ಬಂತು ನೋಡಿ ಆವಾಗ. ಉಗ್ರರು ಅಷ್ಟು ರಾಜರೋಷವಾಗಿ ಮುಂಬೈಗೆ ಬಂದಿದ್ದಾರು ಹೇಗೆ ಅಂತ ನೋಡಿದರೆ ಅವರು ಬಂದಿದ್ದು ಜಲ ಮಾರ್ಗದಲ್ಲಿ ಅಂತ ಪೋಲಿಸ್ ಮೂಲಗಳು ಹೇಳಿದ್ದು, ಅದಕ್ಕೆ ಬರುತಿದ್ದ ಪ್ರತಿಕ್ರಿಯೆಗಳನ್ನೂ ನೋಡಬೇಕು, ಅಬ್ಬಾ!!

ಒಂದು ಕಡೆ ಎ.ಟಿ.ಎಸ್ ನವರು ಕೈ ತೊಳೆದುಕೊಂಡು ಕೇವಲ ಮಾಲೆಗಾವ್ ಸ್ಪೋಟದ ಆರೋಪಿಗಳ ಹಿಂದೆಯೇ ಬಿದ್ದಿದ್ದರು, ಅದಕ್ಕೆ ಅವರಿಗೆ ಉಗ್ರರ ಜಾಡು ತಿಳಿಯಲಿಲ್ಲ ಎಂಬ ರೀತಿಯ ಮಾತುಗಳು ಬಂದರೆ,
ಮತ್ತೊಂದು ಕಡೆ ಕೆಲವು ಮಾಧ್ಯಮಗಳಲ್ಲಿ ಉಗ್ರರ ಫೋಟೋ ತೆಗೆದಿದ್ದರಲ್ಲಾ ಅದರ ಆಧಾರದಲ್ಲಿ ಉಗ್ರರ ಮೂಲ ಪತ್ತೆ ಮಾಡುವ ಬದಲು, ಉಗ್ರರ ಧರ್ಮವನ್ನು ಪತ್ತೆ ಹಚ್ಚುವಂತ ಕೆಲಸ ನಡೆಯ್ತುತಿತ್ತು.

ಅಲ್ಲ ಸ್ವಾಮಿ, ಇಂತ ಸಂದಿಗ್ದ ಸಮಯದಲ್ಲೂ ಈ ಧರ್ಮವನ್ನು ಮದ್ಯೆ ಎಳೆದು ತರುವ ರಾಜಕಾರಣಿಗಳು,ವಿಚಾರವಾದಿಗಳು,ಬುದ್ದಿಜೀವಿಗಳು,ಕೋಮುವಾದಿಗಳಿಗೆ ಮನುಷ್ಯತ್ವ ಅನ್ನುವುದು ಇದೆಯಾ ಅಥವಾ ಅವರುಗಳಿಗೆ ಆ ಪದದ ಅರ್ಥವಾದರೂ ತಿಳಿದಿದೆಯಾ ಅನ್ನಿಸುತ್ತೆ. ಸತ್ತವನ ರಕ್ತದಲ್ಲಿ ಅವನ ಧರ್ಮ ಕಾಣುತ್ತಾ? ಉಗ್ರರಿಂದ ಬಂದ ಬುಲೆಟ್ ಎದುರಿಗಿದ್ದವನ ಧರ್ಮ ಕೇಳಿ ಒಳ ನುಗ್ಗಿತ್ತಾ?
ಭಾವನಾತ್ಮಕ ವಿಷಯಗಳಲ್ಲಿ ತಮ್ಮ ಬೆಳೆ ಬೇಯಿಸಿಕೊಳ್ಳುವ ಇಂತ ಜನರನ್ನು ದೂರವಿಡದಿದ್ದರೆ, ಭಾರತ ಭಾರತವಾಗಿ ಉಳಿಯುವುದೇ ಇಲ್ಲ.

ಸಂಸತ್ ದಾಳಿಯ ಸೂತ್ರಧಾರನನ್ನು ಹಿಡಿದು ತಂದರೆ , ಚಿಲ್ಲರೆ ವೋಟುಗಳಿಗಾಗಿ ಆಫ್ಜ್ಯಲ್ ಅನ್ನು ಇನ್ನೂ ಜೀವಂತವಾಗಿಟ್ಟಿದ್ದಾರೆ. ಇಂತವರಿಗೆ ಯಾವುದರಲ್ಲಿ ಹೊಡೆಯಬೇಕು?
ಮೊನ್ನೆ ಮೊನ್ನೆ ತಾನೆ ಗುಜರಾತಿನಲ್ಲಿ ನಡೆದ ಸ್ಪೋಟದ ತನಿಖೆ ವೇಳೆ ಪೋಲಿಸ್ ಎನ್ ಕೌಂಟರ್ನಲ್ಲಿ ಉಗ್ರರ ಹತ್ಯೆಮಾಡಲಾಗಿತ್ತು. ಆಗ ಅದೆಲ್ಲಿಂದ ಎದ್ದು ಬಂದನೋ ಈ ಅಮರ್ ಸಿಂಗ್ , ಅವನಿಗೆ ಅಲ್ಲಿ ಹುತಾತ್ಮರಾದ ಪೋಲಿಸ್ ಅಧಿಕಾರಿಯ ಬಗ್ಗೆ ಏನು ಅನ್ನಿಸುವುದಿಲ್ಲ, ಆದರೆ ಹತರಾದ ಉಗ್ರರ ಬಗ್ಗೆ ಸಿಂಪತಿ ತೋರಿಸುತ್ತಾನೆ?
ಶಂಕಿತ ಉಗ್ರರನ್ನು ಪೊಲೀಸರು ಸೆರೆ ಹಿಡಿದು ತಂದರೆ ಅಲ್ಲೂ ಧರ್ಮವನ್ನು ಎಳೆದು ತಂದವರು ಲಾಲೂ, ಪಾಸ್ವಾನ್ ತರದ ಕೆಟ್ಟ ಜನ . ಬ್ರೂಕರ್ ವಿಜೇತೆ ಅರುನ್ದತಿಗೂ ಪೊಲೀಸರ ಮೇಲೆಯೇ ಸಂಶಯ ಬರುತ್ತೆ.
ಇನ್ನು ಮಾಲೆಗಾವ್ ಆರೋಪಿಗಳು ಸಿಕ್ಕಿದಾಗಲಂತೂ ಇವರಿಗೆಲ್ಲ ಹಬ್ಬವೇ, ಯಾವನೋ ತಲೆ ಮಾಸಿದವ ಮಾಡಿದ ತಪ್ಪಿಗೆ ಒಂದಿಡಿ ಧರ್ಮವನ್ನು ತಂದುಬಿಡುವುದೇ? ಅಡ್ವಾಣಿ ಹಾಗೂ ಕೆಲವರಂತೂ ಎ.ಟಿ.ಎಸ್ ನವರ ಕಮಿಟ್ಮೆಂಟ್ ಬಗ್ಗೆಯೇ ಮಾತನಾಡುತ್ತಾರೆ? ಕಮಿಟ್ಮೆಂಟ್ ಇಲ್ಲದ ಅಧಿಕಾರಿಯಾಗಿದ್ದರೆ ಹೇಮಂತ್
ಅವರಂತಹ ಹಿರಿಯ ಅಧಿಕಾರಿ ಬಲಿಯಾಗುತಿದ್ದರೆ?

" ನನ್ನನ್ನು 'ಚಕಮಕಿ ಚತುರ' ಅನ್ನಬೇಡಿ ಹಾಗೆ ಹೇಳಿದರೆ, ಇವನಿಗೆ ಎನ್ಕೌಂಟರ್ ಮಾಡುವುದೇ ಹವ್ಯಾಸ ಅಂತ ಮಾನವ ಹಕ್ಕು ಆಯೋಗದವರು ನನ್ನ ಹಿಂದೆ ಬೀಳುತ್ತಾರೆ" ಅಂತ ಹೇಳಿದ್ದು , ಮೊನ್ನೆ ಹುತಾತ್ಮರಾದ ವಿಜಯ್ ಸಾಲಸ್ಕರ್ ಅವರು, ಅವರ ಹೇಳಿಕೆಯನ್ನು ಗಮನಿಸಿದರೆ ನಮ್ಮ ದೇಶದಲ್ಲಿ ಇಂತ ಅಧಿಕಾರಿಗಳು ಎಷ್ಟು ಒತ್ತಡದ ನಡುವೆ ಕೆಲಸ ಮಾಡುತ್ತಾರೆ ತಿಳಿಯುತ್ತದೆ.

'ಇನ್ನು ಮುಂದೆ ಎಚ್ಚರ ವಹಿಸಲಾಗುತ್ತದೆ, ಇಂತ ವಿದ್ವಂಸಕ ಕೃತ್ಯಗಳಿಗೆ ಅವಕಾಶ ನೀಡುವುದಿಲ್ಲ ' ಅಂತ ಶಿವರಾಜ್ ಪಾಟೀಲರು ಭಾಷಣ ಮಾಡಿದ್ದೆ ಬಂತು, ಇಂಟೆಲಿಜೆನ್ಸ್ ಅನ್ನು ದೇಶದ ವೈರಿಗಳ ಚಲನ ವಲನದ ಮೇಲೆ ಕಣ್ಣಿಡಲು ಬಳಸುವುದನ್ನು ಬಿಟ್ಟು ವೀರೋಧ ಪಕ್ಷದ ನಾಯಕರ ಹಿಂದೆ ಬಿಟ್ಟರೆ, ಇಂಟೆಲಿಜೆನ್ಸ್ ಫೈಲ್ ಆಗದೆ ಇರುತ್ತಾ?

ಉರಿವ ಚಿತೆಯಲ್ಲೂ ಚಳಿ ಕಾಯಿಸಿ ಕೊಳ್ಳುವ ಜನ ಇವರು.

ತಮ್ಮ ಪ್ರಾಣವನ್ನು ಪಣಕಿಟ್ಟು ಉಗ್ರರೊಡನೆ ಹೋರಾಡುವ ಯೋಧರ ಬಗ್ಗೆ ಯೋಚಿಸುವುದು ಬೇಡವೇ, ಅವರಿಗೂ ನಮ್ಮಂತೆಯೇ ತಂದೆ,ತಾಯಿ,ಹೆಂಡತಿ,ಮಕ್ಕಳು ,ಅಕ್ಕ ತಂಗಿ,ತಮ್ಮ,ಅಣ್ಣ ಎಲ್ಲ ಇರುತ್ತಾರೆ, ಅವರು ಮನುಷ್ಯರೇ ಅಲ್ಲವೇ?

ಉಗ್ರರ ಅಟ್ಟಹಾಸಕ್ಕೆ ಬಲಿಯಾದ ಮುಗ್ದ ಜೀವಗಳಿಗೆ ಹಾಗೂ ಮಹಾನ್ ಅಧಿಕಾರಿಗಳಿಗೆ, ಯೋಧರಿಗೆ ನನ್ನ ನುಡಿ ನಮನ.

Tuesday, November 18, 2008

ಕುಮಾರನ ಪಟ್ಟಾಭಿಷೇಕ.. ಬೆಂಗಳೂರಿಗರಿಗೆ ತಾಕಿದ ಶಾಖ...

ಇವ್ರಿಗೆ ಬೇರೆ ಎಲ್ಲೂ ಜಾಗ ಸಿಗಲಿಲ್ಲವಾ? ಬೆಂಗಳೂರೇ ಬೇಕಾ? ಅದರಲ್ಲೂ ನಗರದ ನಟ್ಟ ನಡುವೆ ಈ ರೀತಿಯ ಒಂದು ಸಮಾರಂಭ ಬೇಕಾ? ಇವತ್ತು ನನಗೆ ಇಂಟರ್ವ್ಯೂ ಇದೆ ಸರ್, ಮಿಸ್ ಆಗ್ಬಿಟ್ರೆ , ನಿಮಗೆ ಗೊತ್ತಲ್ಲ ಸರ್ ಮಾರ್ಕೆಟ್ ಬೇರೆ ಕುಸಿದಿದೆ, ಇಂಟರ್ವ್ಯೂ ಕಾಲ್ ಬರೋದೇ ಕಷ್ಟ, ಅಂತದ್ದರಲ್ಲಿ ಬಂದಿರುವ ಅವಕಾಶ ಇವರ ಪಟ್ಟಾಭಿಷೇಕ ಮಹೋತ್ಸವಕ್ಕೆ ಸಿಕ್ಕಿ ಹಾಳಗುತ್ತಾ??

ಹೀಗೆ ಹೀಗೆ ಒಂದೇ ಸಮನೆ ತನ್ನ ದಿಗಿಲನ್ನು, ಹೇಳುತ್ತಿದ್ದವ , ಬಸ್ಸಿನಲ್ಲಿ ನನ್ನ ಮುಂದೆ ಕುಳಿತಿದ್ದ ಯುವಕ. ಹೌದು, ರೀ ನಿನ್ನೆ ನಾನು ನನ್ನಂತಹ, ಎಷ್ಟೋ ಜನರು ಪಡಬಾರದ ಪಾಡು ಪಟ್ಟು ಮನೆ ತಲುಪಿದ್ದಾರೆ, ಕೈಲಾದವರು ಆಟೋದಲ್ಲಿ ಒಂದಕ್ಕೆ ಎರಡರಷ್ಟು ಕೊಟ್ಟು ಹೋದರೆ, ಇನ್ನು ಕೆಲವರು ಬಸ್ಸಿನಲ್ಲೇ ಹೋದರು, ಇನ್ನು ಕೆಲವರಿಗೆ ಹೋಗಲು ಬಸ್ಸೇ ಇಲ್ಲ, ನಟರಾಜ ಸರ್ವಿಸ್ ಅವರದು ಪಾಪ Sad

ಟ್ರಾಫಿಕ್ನ ನಡುವೆ ಅನಾಥವಾಗಿ ಕೂಗುತಿದ್ದ ಅಂಬುಲೆನ್ಸ್ಗಳನ್ನೂ ಕೇಳುವವರೇ ಇಲ್ಲ, ಅದರಲ್ಲಿದ್ದವ್ರ ಕತೆ ಏನಾಗಿರಬೇಡ? ಶಾಲೆ ಬಿಟ್ಟು ಮನೆಗೆ ಹೋಗುತ್ತಿದ್ದ ಮಕ್ಕಳನ್ನು ನೋಡಬೇಕು, ಬಸ್ಸ್ ನಿಲ್ದಾಣದಲ್ಲಿ ಕಾದು ಕಾದು ಬಸವಳಿದಿದ್ದ , ಆ ಮುಖಗಳು, ವಯೋವ್ರುದ್ದರು ಅಬ್ಬಾ!!

ಇವೆಲ್ಲ ನಮ್ಮ ರಾಜಕಾರಣಿಗಳ ಬುದ್ದಿಗೆ ಹೊಳೆಯುವುದಿಲ್ಲವೇ? (ಅವರಿಗೆ ಬುದ್ದಿ ಇರುತ್ತಾ ?), ಇದೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ನ್ಯಾಯಾಲಯ , ಇಂತಹ ಸಭೆ ಸಮಾರಂಭಗಳನ್ನೂ ಊರ ಹೊರಗೆ ಮಾಡಿ ಎಂದು, ಆದರೆ ನಮ್ಮ ರಾಜಕಾರಣಿಗಳಿಗೆ ಅದು ಕೇಳುವುದೇ ಇಲ್ಲ.

ನಿನ್ನೆಯಂತು ಜೆ.ಡಿ.ಎಸ್ ನವರಿಗೆ ಅದೆಷ್ಟು ಮಂದಿ ಶಾಪ ಹಾಕಿದ್ದರೋ ಗೊತ್ತಿಲ್ಲ!!!!!

Monday, November 3, 2008

"ಚಿತ್ರನ್ನಾಕ್ಕು ಸಂಚಕಾರ ತಂದ ಲೆಹಮನ್ ಬ್ರದರ್ಸ್!!"

ಈ ತಲೆಸಾಲು ಸರಿ ಇಲ್ಲ , ಚಿತ್ರಾನ್ನಕ್ಕೆ ಯಾರು ಟೊಮೇಟೊ ಹಾಕೋದಿಲ್ಲ ಅಂತ ಗೆಳತಿ ಸವಿತಾ ಅವರು ಸಾರಿ ಸಾರಿ ಹೇಳಿದ್ರು ನಾನು ಕೇಳಿಲ್ಲ. ನಮ್ಮ ಚಿತ್ರಾನ್ನದ ವಿಶೇಷ ಅಂದ್ರೆ ಟೊಮೇಟೊ ಹಾಕೋದೆ ರೀ ಮೇಡಂ ಅಂತ ಹೇಳಿ ಬರೀತಿದ್ದೀನಿ.

ಮೊನ್ನೆ (ಶುಕ್ರವಾರ) ಮಾರುಕಟ್ಟೆಗೆ ಹೋಗಿ ತರಕಾರಿಯ ಬೆಲೆ ಕೇಳಿ ತಲೆ ತಿರುಗಿ ಹೋಯ್ತು. ನಂಗೆ ಅತಿ ಮುಖ್ಯವಾಗಿ ಬೇಕಾಗಿರೋ 'ಟೊಮೇಟೊ , ಹಸಿರು ಮೆಣಸಿನಕಾಯಿ' ಬೆಲೆ ಗಗನಕ್ಕೆ ಏರಿಕುಳಿತಿತ್ತು.
"ಟೊಮೇಟೊ ಎಷ್ಟಕ್ಕೋ" ಅಂದ್ರೆ 80 ರೂಪಾಯಿ ಅನ್ನಬೇಕೆ!!

ನನಗೋ ಟೊಮೇಟೊ ಇಲ್ಲಾಂದ್ರೆ ಚಿತ್ರಾನ್ನ ಮಾಡೋಕೆ ಇಷ್ಟ ಆಗೋಲ್ಲ. ಬೇರೆ ಏನು ಮಾಡೋದು ಇಲ್ಲ
(ನಿಜ ಹೇಳ್ಬೇಕು ಅಂದ್ರೆ ಚಿತ್ರಾನ್ನ ಬಿಟ್ಟು ಬೇರೆ ಏನು ಮಾಡೋಕು ಬರೋಲ್ಲ ನಂಗೆ:) )
ಮನಸಿನ್ನಲ್ಲೇ ಲೆಹಮನ್ ಬ್ರದರ್ಸ್ರನ್ನು ಶಪಿಸುತ್ತ ಮನೆ ದಾರಿ ಹಿಡಿದೆ.

-- ರಾಕೇಶ್ ಶೆಟ್ಟಿ Laughing out loud