Tuesday, November 18, 2008

ಕುಮಾರನ ಪಟ್ಟಾಭಿಷೇಕ.. ಬೆಂಗಳೂರಿಗರಿಗೆ ತಾಕಿದ ಶಾಖ...

ಇವ್ರಿಗೆ ಬೇರೆ ಎಲ್ಲೂ ಜಾಗ ಸಿಗಲಿಲ್ಲವಾ? ಬೆಂಗಳೂರೇ ಬೇಕಾ? ಅದರಲ್ಲೂ ನಗರದ ನಟ್ಟ ನಡುವೆ ಈ ರೀತಿಯ ಒಂದು ಸಮಾರಂಭ ಬೇಕಾ? ಇವತ್ತು ನನಗೆ ಇಂಟರ್ವ್ಯೂ ಇದೆ ಸರ್, ಮಿಸ್ ಆಗ್ಬಿಟ್ರೆ , ನಿಮಗೆ ಗೊತ್ತಲ್ಲ ಸರ್ ಮಾರ್ಕೆಟ್ ಬೇರೆ ಕುಸಿದಿದೆ, ಇಂಟರ್ವ್ಯೂ ಕಾಲ್ ಬರೋದೇ ಕಷ್ಟ, ಅಂತದ್ದರಲ್ಲಿ ಬಂದಿರುವ ಅವಕಾಶ ಇವರ ಪಟ್ಟಾಭಿಷೇಕ ಮಹೋತ್ಸವಕ್ಕೆ ಸಿಕ್ಕಿ ಹಾಳಗುತ್ತಾ??

ಹೀಗೆ ಹೀಗೆ ಒಂದೇ ಸಮನೆ ತನ್ನ ದಿಗಿಲನ್ನು, ಹೇಳುತ್ತಿದ್ದವ , ಬಸ್ಸಿನಲ್ಲಿ ನನ್ನ ಮುಂದೆ ಕುಳಿತಿದ್ದ ಯುವಕ. ಹೌದು, ರೀ ನಿನ್ನೆ ನಾನು ನನ್ನಂತಹ, ಎಷ್ಟೋ ಜನರು ಪಡಬಾರದ ಪಾಡು ಪಟ್ಟು ಮನೆ ತಲುಪಿದ್ದಾರೆ, ಕೈಲಾದವರು ಆಟೋದಲ್ಲಿ ಒಂದಕ್ಕೆ ಎರಡರಷ್ಟು ಕೊಟ್ಟು ಹೋದರೆ, ಇನ್ನು ಕೆಲವರು ಬಸ್ಸಿನಲ್ಲೇ ಹೋದರು, ಇನ್ನು ಕೆಲವರಿಗೆ ಹೋಗಲು ಬಸ್ಸೇ ಇಲ್ಲ, ನಟರಾಜ ಸರ್ವಿಸ್ ಅವರದು ಪಾಪ Sad

ಟ್ರಾಫಿಕ್ನ ನಡುವೆ ಅನಾಥವಾಗಿ ಕೂಗುತಿದ್ದ ಅಂಬುಲೆನ್ಸ್ಗಳನ್ನೂ ಕೇಳುವವರೇ ಇಲ್ಲ, ಅದರಲ್ಲಿದ್ದವ್ರ ಕತೆ ಏನಾಗಿರಬೇಡ? ಶಾಲೆ ಬಿಟ್ಟು ಮನೆಗೆ ಹೋಗುತ್ತಿದ್ದ ಮಕ್ಕಳನ್ನು ನೋಡಬೇಕು, ಬಸ್ಸ್ ನಿಲ್ದಾಣದಲ್ಲಿ ಕಾದು ಕಾದು ಬಸವಳಿದಿದ್ದ , ಆ ಮುಖಗಳು, ವಯೋವ್ರುದ್ದರು ಅಬ್ಬಾ!!

ಇವೆಲ್ಲ ನಮ್ಮ ರಾಜಕಾರಣಿಗಳ ಬುದ್ದಿಗೆ ಹೊಳೆಯುವುದಿಲ್ಲವೇ? (ಅವರಿಗೆ ಬುದ್ದಿ ಇರುತ್ತಾ ?), ಇದೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ನ್ಯಾಯಾಲಯ , ಇಂತಹ ಸಭೆ ಸಮಾರಂಭಗಳನ್ನೂ ಊರ ಹೊರಗೆ ಮಾಡಿ ಎಂದು, ಆದರೆ ನಮ್ಮ ರಾಜಕಾರಣಿಗಳಿಗೆ ಅದು ಕೇಳುವುದೇ ಇಲ್ಲ.

ನಿನ್ನೆಯಂತು ಜೆ.ಡಿ.ಎಸ್ ನವರಿಗೆ ಅದೆಷ್ಟು ಮಂದಿ ಶಾಪ ಹಾಕಿದ್ದರೋ ಗೊತ್ತಿಲ್ಲ!!!!!

Monday, November 3, 2008

"ಚಿತ್ರನ್ನಾಕ್ಕು ಸಂಚಕಾರ ತಂದ ಲೆಹಮನ್ ಬ್ರದರ್ಸ್!!"

ಈ ತಲೆಸಾಲು ಸರಿ ಇಲ್ಲ , ಚಿತ್ರಾನ್ನಕ್ಕೆ ಯಾರು ಟೊಮೇಟೊ ಹಾಕೋದಿಲ್ಲ ಅಂತ ಗೆಳತಿ ಸವಿತಾ ಅವರು ಸಾರಿ ಸಾರಿ ಹೇಳಿದ್ರು ನಾನು ಕೇಳಿಲ್ಲ. ನಮ್ಮ ಚಿತ್ರಾನ್ನದ ವಿಶೇಷ ಅಂದ್ರೆ ಟೊಮೇಟೊ ಹಾಕೋದೆ ರೀ ಮೇಡಂ ಅಂತ ಹೇಳಿ ಬರೀತಿದ್ದೀನಿ.

ಮೊನ್ನೆ (ಶುಕ್ರವಾರ) ಮಾರುಕಟ್ಟೆಗೆ ಹೋಗಿ ತರಕಾರಿಯ ಬೆಲೆ ಕೇಳಿ ತಲೆ ತಿರುಗಿ ಹೋಯ್ತು. ನಂಗೆ ಅತಿ ಮುಖ್ಯವಾಗಿ ಬೇಕಾಗಿರೋ 'ಟೊಮೇಟೊ , ಹಸಿರು ಮೆಣಸಿನಕಾಯಿ' ಬೆಲೆ ಗಗನಕ್ಕೆ ಏರಿಕುಳಿತಿತ್ತು.
"ಟೊಮೇಟೊ ಎಷ್ಟಕ್ಕೋ" ಅಂದ್ರೆ 80 ರೂಪಾಯಿ ಅನ್ನಬೇಕೆ!!

ನನಗೋ ಟೊಮೇಟೊ ಇಲ್ಲಾಂದ್ರೆ ಚಿತ್ರಾನ್ನ ಮಾಡೋಕೆ ಇಷ್ಟ ಆಗೋಲ್ಲ. ಬೇರೆ ಏನು ಮಾಡೋದು ಇಲ್ಲ
(ನಿಜ ಹೇಳ್ಬೇಕು ಅಂದ್ರೆ ಚಿತ್ರಾನ್ನ ಬಿಟ್ಟು ಬೇರೆ ಏನು ಮಾಡೋಕು ಬರೋಲ್ಲ ನಂಗೆ:) )
ಮನಸಿನ್ನಲ್ಲೇ ಲೆಹಮನ್ ಬ್ರದರ್ಸ್ರನ್ನು ಶಪಿಸುತ್ತ ಮನೆ ದಾರಿ ಹಿಡಿದೆ.

-- ರಾಕೇಶ್ ಶೆಟ್ಟಿ Laughing out loud

Friday, October 24, 2008

ದೀಪಾವಳಿಯ 'ಒಲವಿನ ಉಡುಗೊರೆ'

'ರಾಖಿ' ಹಬ್ಬದ ದಿನ ನೀ ಬಂದು
'ರಾಕಿ' ಎಂದು ನನ್ನ ಕರೆದಾಗಲೇ
ಮನದಲ್ಲಿ ಅನ್ನಿಸಿತ್ತು , ಏನೋ
'ಅನಾಹುತ' ನನಗಾಗಿ ಕಾಯುತ್ತಿದೆ ಎಂದು.

'ರಕ್ಷಾ ಬಂಧನ'ವ ಕಟ್ಟಲು ನೀ ಬಂದೆಯಾ?
ಎಂದು ನಾ ಕೇಳುವಷ್ಟರಲ್ಲಿ , ನೀ
ಕಟ್ಟಿದ್ದೆ ನನಗೆ 'ಪ್ರೇಮ ಬಂಧನ'ವ.

'ಕ್ಯಾಂಡಲ್ ಲೈಟ್ ಡಿನ್ನರ್' ಗೆ ನನ್ನ ಆಹ್ವಾನಿಸಿ
ಲೈಟ್ ಆರಿಸಿ , ಕ್ಯಾಂಡಲ್ ನನ್ನ ಕೈಗಿಟ್ಟು
ಕಾಣದಂತೆ ಮಾಯವಾದವಳು ನೀನೆ ಅಲ್ವಾ!!

ಮತ್ತೆ ನೀ ಕಾಣಿಸಿದ್ದು ದೀಪಾವಳಿಯ ದಿನ
ದೀಪ ಹಿಡಿದು ನಿಂತ ಮುದ್ದು ಗೌರಿಯಂತೆ
ಪ್ರೀತಿಯಿಂದ ನೀ ಕೊಟ್ಟೆ ದೀಪಾವಳಿ ಉಡುಗೊರೆ
ತೆರೆದು ನೋಡಿದರೆ ಇತ್ತು ಅದರಲ್ಲಿ
ನಿನ್ನ 'ಮದುವೆಯ ಕರೆಯೋಲೆ '!!

-- ರಾಕೇಶ್ ಶೆಟ್ಟಿ Smiling

Thursday, October 23, 2008

ನಾನು ನನ್ನ ಪ್ರಿಯೆ

ನನ್ನ ಮನದ ಮನೆಯಲ್ಲಿ ನೀನೆ ಹಚ್ಚಿಟ್ಟ
ಪ್ರೀತಿಯ ದೀಪವ, ಕಾರಣ ಹೇಳದೆ ಏಕೆ ಆರಿಸಿ ಹೋದೆ ಗೆಳತಿ.
ನಮ್ಮ ಒಲವಿನ ದೋಣಿಯು ಬಿರುಗಾಳಿಗೆ ಸಿಕ್ಕಿದ್ದಾದರೂ ಹೇಗೆ.
ನೀ ಕೊಟ್ಟ ಪ್ರೀತಿಯ ಗುಲಾಬಿಯಲ್ಲಿ
ಮೋಸವೆಂಬ ಮುಳ್ಳನ್ನು ನಾ ನೋಡಲೇ ಇಲ್ಲ.

ಪ್ರೀತಿಯೆಂಬುದು '೨ ಹೃದಯಗಳ ವಿಷಯ' ಎಂದು ಹೇಳುತ್ತಾ
ನೀನು '೩ ನೆ ಹೃದಯ'ವ ಸದ್ದಿಲ್ಲದೆ ಹುಡುಕಿಕೊಂಡಿದ್ದೆ!
ಆಗ ನೆನಪಿಗೆ ಬಂದಿದ್ದು , ನೀನು ಯಾವಾಗಲು ಹೇಳುತ್ತಿದ್ದ ಮಾತು
" ಪ್ರಿಯ ನಮ್ಮ ಪ್ರೀತಿ 2 way " ಎಂದು.
ಆದರೆ ನಿನ್ನ ಇನ್ನೊಂದು way ನನಗೆ ತಿಳಿಯುವಷ್ಟರಲ್ಲಿ
ನಿನಗೆ ಮದುವೆಯಾಗಿ 2 ಮಕ್ಕಳು ಆಗಿದ್ದವು!!!!!


-- ರಾಕೇಶ್ ಶೆಟ್ಟಿ Smiling

ಪುಷ್ಪಕ ವಿಮಾನದ ಚೆಲುವೆ

ಮುಂಜಾನೆಯ ಮಂಜಿನಲಿ, ಚುಮು ಚುಮು ಚಳಿಯಲಿ
ಕುಳಿತಿದ್ದೆ ನಾ ಕಬ್ಬನ್ ಪಾರ್ಕಿನ ಬೆಂಚುಗಲ್ಲಿನ ಮೇಲೆ
ಹಕ್ಕಿಗಳ ಕಲರವದ ಗಾನ ಕಿವಿಯಲ್ಲಿ ಗುಯ್ಯ್ ಗುಡುತ್ತಿತ್ತು
ಆ ಚಿಲಿ ಪಿಲಿ ಗಾನದ ನಡುವೆಯೂ ಅದೆಂತದೋ ದಿವ್ಯ ಮೌನ

ತಂಗಾಳಿಯು ನನ್ನೆಡೆಗೆ ತೇಲಿ ಬಂದ ಅನುಭವ
ಕಣ್ಣೆತ್ತಿ ನೋಡಿದರೆ ಎದುರಿಗೆ ನಿಂತಿದ್ದಳು
ಮುಂಜಾನೆಯ ಮಂಜಿನಂತೆ ಕಂಗೊಳಿಸುತಿದ್ದಳು
ಚಂದ್ರನ ಕಂಡ ನೈದಿಲೆಯಂತೆ ಸಂತಸ ಮನದಲ್ಲಿ

ಅವಳ ಕಣ್ಣುಗಳ ಕಡಲಲ್ಲಿ ನಾ ತೇಲುತಿದ್ದರೆ
ಮೌನವೆ ಮಾತಾಗಿ, ಲೋಕ ಮರೆತೆ ಹೋಯಿತು
ಮೌನ ಸೀಳಿ ಮನದ ಮಾತ ಹೇಳಿದಳು ಅವಳು

'ಅನಿಸುತಿದೆ ಯಾಕೋ ಇಂದು' ಎಂದು ಹಾಡುತ್ತಾ
ನನ್ನ ಪಕ್ಕ ಬಂದು ಕುಳಿತು ನಕ್ಕಳು.
ಕುಳಿತವಳೇ 'ವಿಧಾನ ಸೌಧ'ದ ಗೋಪುರ
ತೋರಿಸಿ ಮುಗ್ದವಾಗಿ, ಪ್ರಿಯ ನನ್ನ ಅಲ್ಲಿಗೆ
ಕರೆದುಕೊಂಡು ಹೋಗುವೆಯ ಎಂದು ಕೇಳಿದಾಗ
'ಮುಂಗಾರು ಮಳೆ'ಯ ಆ ಮುಗ್ದ ಹುಡುಗೀ ನೀನೆ ಎಂದು
'ಕುಣಿದು ಕುಣಿದು ' ಬಾರೆ ಎಂದು ನಾ ಹಾಡುತ್ತಿರುವಾಗಲೇ
ಬಂದೆ ಬಿಟ್ಟಿತಲ್ಲ ನಿನ್ನ ಕರೆದೊಯ್ಯಲು ,
'ತವರು ಮನೆಯ ಪುಷ್ಪಕ ವಿಮಾನ' (ಹುಚ್ಚಾಸ್ಪತ್ರೆ ವಾಹನ)!!

- ರಾಕೇಶ್ ಶೆಟ್ಟಿ Smiling

ಹಾಟ್ಸ್ ಆಪ್ ಇಂಡಿಯಾ

ಇಂದು ಈ ಗೀತೆಯನ್ನು ಕೇಳುತಿದ್ದೆ. ಆಹಾ ಕೇಳಲು ಕರ್ಣಾನಂದ.
'ಹಂಸಲೇಖ' ಅವರ ಲೇಖನಿಯಿಂದ ಮೂಡಿಬಂದಿರುವ ಈ ಗೀತೆಯನ್ನೊಮ್ಮೆ ನೋಡಿ.
ಕವಿ ಮನಸಿನಲ್ಲಿ ಭವ್ಯ ಭಾರತದ ಚಿತ್ರಣ ಬಿಡಿಸಿಟ್ಟಿದ್ದಾರೆ ಹ್ಯಾಟ್ಸ್ ಆಪ್ ಟು ಹಂಸಲೇಖ.

"ಒಂದು ಬಾಣ ಪಕ್ಷಿಗೆ ತಾಕಿದರೆ
ರಾಮಾಯಣ ಕಾವ್ಯ ಹರಿಯುವುದು
ಒಂದು ಹೆಣ್ಣು ನೊಂದು ಕೂಗಿದರೆ
ಮಹಾಭಾರತ ಕಥನ ಕೇಳುವುದು
ಗಂಗಾ ಯಮುನಾ ತುಂಗಾ ಭದ್ರಾ...

ನದಿ ನದೆಗಳೇ ಇವಳಿಗೆ ನರ ನಾಡಿ
ಸಾಗರಗಳೇ ಇವಳಿಗೆ ಒಡನಾಡಿ
ಮಹಾ ವೀರರ, ಸಿಕ್ಖರ, ಸಿದ್ದರ , ಬುದ್ದರ
ಜನನಿ ಜನನಿ ನೀ

ಹಾಟ್ಸ್ ಆಪ್ ಇಂಡಿಯಾ ಹಾಟ್ಸ್ ಆಪ್ ಇಂಡಿಯಾ

ವಿಜಯೋತ್ಸವಕೆ ಬಂಗಾರದ ಮಳೆಗರೆದರು
ವಜ್ರ ವೈಡೂರ್ಯ ನಡು ಬೀದೀಲಿ ಚೆಲ್ಲಾಡಿದರು
ಗೆದ್ದವನಿಲ್ಲಿ ಸೋತವನ ಸನ್ಮಾನಿಸಿದ
ಗೊಮ್ಮಟನಾಗಿ ತ್ಯಾಗದಲ್ಲಿ ರಾರಾಜಿಸಿದ

ರಾಗ ಯೋಗ ನಾದ ವೇದ
ಧರೆಗೆ ತಂದರು ಸುಖಿಸಿ ಎಂದರು

ಇಲ್ಲಿ ಬಾಳಿನ ಚಿಂತೆ ಸಂತರದು
ಇಲ್ಲಿ ನಾಳಿನ ಚಿಂತೆ ದೇವರದು
ತುಂಡು ಬಟ್ಟೆಯ ತಾತನ ಉಪವಾಸ
ಘನ ಗುಲಾಮ ಗಿರಿಯ ಕಳೆಯುವುದೂ

ನಾದ ವೇದ ನಾಟ್ಯ ದೈವ
ಇಲ್ಲಿ ತೆಂಕಣವೆಲ್ಲ ದೈವ ಸ್ವರ
ಇಲ್ಲಿ ಬಡಗಣವೆಲ್ಲ ಧರ್ಮ ಸ್ವರ
ರಾಮ ಕೃಷ್ಣ ವಿವೇಕರ
ಸಂತರ ಸಿದ್ದರ ಜನನಿ ಜನನಿ ನೀ

ಹಾಟ್ಸ್ ಆಪ್ ಇಂಡಿಯಾ ಹಾಟ್ಸ್ ಆಪ್ ಇಂಡಿಯಾ "

-ರಾಕೇಶ್ ಶೆಟ್ಟಿ Smiling

ಮೋಹಿನಿ ಕಾಟ

'ಆಕಾಶವೇ ಬೀಳಲಿ ಮೇಲೆ' ಎಂದು ನಾ ಹಾಡುತಿದ್ದರೆ
'ನಾ ನಿನ್ನ ಮರೆಯಲಾರೆ' ಎಂದು ನೀ ಹಾಡುತಿದ್ದೆ ಅಂದು
ಆದರೆ ಇಂದು "ತಂಗಾಳಿಯಲ್ಲಿ ನಾನು ತೇಲಿ ಬಂದೆ " ಎಂದು
ನೀನು "ಮೋಹಿನಿ"ಯಾಗಿ ನನ್ನ ಏಕೆ ಕಾಡುತ್ತಿರುವೆ? ಸಿಂಧು
ಅಷ್ಟಕ್ಕೂ ನಿನಗೆ 'Drink N Drive' ಮಾಡಿ!
'ಸ್ವರ್ಗ' ಸೇರಲು ನಾ ಹೇಳಿದ್ದೆನಾ!!?

- ರಾಕೇಶ್ ಶೆಟ್ಟಿ Laughing out loud