Tuesday, November 18, 2008

ಕುಮಾರನ ಪಟ್ಟಾಭಿಷೇಕ.. ಬೆಂಗಳೂರಿಗರಿಗೆ ತಾಕಿದ ಶಾಖ...

ಇವ್ರಿಗೆ ಬೇರೆ ಎಲ್ಲೂ ಜಾಗ ಸಿಗಲಿಲ್ಲವಾ? ಬೆಂಗಳೂರೇ ಬೇಕಾ? ಅದರಲ್ಲೂ ನಗರದ ನಟ್ಟ ನಡುವೆ ಈ ರೀತಿಯ ಒಂದು ಸಮಾರಂಭ ಬೇಕಾ? ಇವತ್ತು ನನಗೆ ಇಂಟರ್ವ್ಯೂ ಇದೆ ಸರ್, ಮಿಸ್ ಆಗ್ಬಿಟ್ರೆ , ನಿಮಗೆ ಗೊತ್ತಲ್ಲ ಸರ್ ಮಾರ್ಕೆಟ್ ಬೇರೆ ಕುಸಿದಿದೆ, ಇಂಟರ್ವ್ಯೂ ಕಾಲ್ ಬರೋದೇ ಕಷ್ಟ, ಅಂತದ್ದರಲ್ಲಿ ಬಂದಿರುವ ಅವಕಾಶ ಇವರ ಪಟ್ಟಾಭಿಷೇಕ ಮಹೋತ್ಸವಕ್ಕೆ ಸಿಕ್ಕಿ ಹಾಳಗುತ್ತಾ??

ಹೀಗೆ ಹೀಗೆ ಒಂದೇ ಸಮನೆ ತನ್ನ ದಿಗಿಲನ್ನು, ಹೇಳುತ್ತಿದ್ದವ , ಬಸ್ಸಿನಲ್ಲಿ ನನ್ನ ಮುಂದೆ ಕುಳಿತಿದ್ದ ಯುವಕ. ಹೌದು, ರೀ ನಿನ್ನೆ ನಾನು ನನ್ನಂತಹ, ಎಷ್ಟೋ ಜನರು ಪಡಬಾರದ ಪಾಡು ಪಟ್ಟು ಮನೆ ತಲುಪಿದ್ದಾರೆ, ಕೈಲಾದವರು ಆಟೋದಲ್ಲಿ ಒಂದಕ್ಕೆ ಎರಡರಷ್ಟು ಕೊಟ್ಟು ಹೋದರೆ, ಇನ್ನು ಕೆಲವರು ಬಸ್ಸಿನಲ್ಲೇ ಹೋದರು, ಇನ್ನು ಕೆಲವರಿಗೆ ಹೋಗಲು ಬಸ್ಸೇ ಇಲ್ಲ, ನಟರಾಜ ಸರ್ವಿಸ್ ಅವರದು ಪಾಪ Sad

ಟ್ರಾಫಿಕ್ನ ನಡುವೆ ಅನಾಥವಾಗಿ ಕೂಗುತಿದ್ದ ಅಂಬುಲೆನ್ಸ್ಗಳನ್ನೂ ಕೇಳುವವರೇ ಇಲ್ಲ, ಅದರಲ್ಲಿದ್ದವ್ರ ಕತೆ ಏನಾಗಿರಬೇಡ? ಶಾಲೆ ಬಿಟ್ಟು ಮನೆಗೆ ಹೋಗುತ್ತಿದ್ದ ಮಕ್ಕಳನ್ನು ನೋಡಬೇಕು, ಬಸ್ಸ್ ನಿಲ್ದಾಣದಲ್ಲಿ ಕಾದು ಕಾದು ಬಸವಳಿದಿದ್ದ , ಆ ಮುಖಗಳು, ವಯೋವ್ರುದ್ದರು ಅಬ್ಬಾ!!

ಇವೆಲ್ಲ ನಮ್ಮ ರಾಜಕಾರಣಿಗಳ ಬುದ್ದಿಗೆ ಹೊಳೆಯುವುದಿಲ್ಲವೇ? (ಅವರಿಗೆ ಬುದ್ದಿ ಇರುತ್ತಾ ?), ಇದೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ನ್ಯಾಯಾಲಯ , ಇಂತಹ ಸಭೆ ಸಮಾರಂಭಗಳನ್ನೂ ಊರ ಹೊರಗೆ ಮಾಡಿ ಎಂದು, ಆದರೆ ನಮ್ಮ ರಾಜಕಾರಣಿಗಳಿಗೆ ಅದು ಕೇಳುವುದೇ ಇಲ್ಲ.

ನಿನ್ನೆಯಂತು ಜೆ.ಡಿ.ಎಸ್ ನವರಿಗೆ ಅದೆಷ್ಟು ಮಂದಿ ಶಾಪ ಹಾಕಿದ್ದರೋ ಗೊತ್ತಿಲ್ಲ!!!!!

Monday, November 3, 2008

"ಚಿತ್ರನ್ನಾಕ್ಕು ಸಂಚಕಾರ ತಂದ ಲೆಹಮನ್ ಬ್ರದರ್ಸ್!!"

ಈ ತಲೆಸಾಲು ಸರಿ ಇಲ್ಲ , ಚಿತ್ರಾನ್ನಕ್ಕೆ ಯಾರು ಟೊಮೇಟೊ ಹಾಕೋದಿಲ್ಲ ಅಂತ ಗೆಳತಿ ಸವಿತಾ ಅವರು ಸಾರಿ ಸಾರಿ ಹೇಳಿದ್ರು ನಾನು ಕೇಳಿಲ್ಲ. ನಮ್ಮ ಚಿತ್ರಾನ್ನದ ವಿಶೇಷ ಅಂದ್ರೆ ಟೊಮೇಟೊ ಹಾಕೋದೆ ರೀ ಮೇಡಂ ಅಂತ ಹೇಳಿ ಬರೀತಿದ್ದೀನಿ.

ಮೊನ್ನೆ (ಶುಕ್ರವಾರ) ಮಾರುಕಟ್ಟೆಗೆ ಹೋಗಿ ತರಕಾರಿಯ ಬೆಲೆ ಕೇಳಿ ತಲೆ ತಿರುಗಿ ಹೋಯ್ತು. ನಂಗೆ ಅತಿ ಮುಖ್ಯವಾಗಿ ಬೇಕಾಗಿರೋ 'ಟೊಮೇಟೊ , ಹಸಿರು ಮೆಣಸಿನಕಾಯಿ' ಬೆಲೆ ಗಗನಕ್ಕೆ ಏರಿಕುಳಿತಿತ್ತು.
"ಟೊಮೇಟೊ ಎಷ್ಟಕ್ಕೋ" ಅಂದ್ರೆ 80 ರೂಪಾಯಿ ಅನ್ನಬೇಕೆ!!

ನನಗೋ ಟೊಮೇಟೊ ಇಲ್ಲಾಂದ್ರೆ ಚಿತ್ರಾನ್ನ ಮಾಡೋಕೆ ಇಷ್ಟ ಆಗೋಲ್ಲ. ಬೇರೆ ಏನು ಮಾಡೋದು ಇಲ್ಲ
(ನಿಜ ಹೇಳ್ಬೇಕು ಅಂದ್ರೆ ಚಿತ್ರಾನ್ನ ಬಿಟ್ಟು ಬೇರೆ ಏನು ಮಾಡೋಕು ಬರೋಲ್ಲ ನಂಗೆ:) )
ಮನಸಿನ್ನಲ್ಲೇ ಲೆಹಮನ್ ಬ್ರದರ್ಸ್ರನ್ನು ಶಪಿಸುತ್ತ ಮನೆ ದಾರಿ ಹಿಡಿದೆ.

-- ರಾಕೇಶ್ ಶೆಟ್ಟಿ Laughing out loud