Friday, October 24, 2008

ದೀಪಾವಳಿಯ 'ಒಲವಿನ ಉಡುಗೊರೆ'

'ರಾಖಿ' ಹಬ್ಬದ ದಿನ ನೀ ಬಂದು
'ರಾಕಿ' ಎಂದು ನನ್ನ ಕರೆದಾಗಲೇ
ಮನದಲ್ಲಿ ಅನ್ನಿಸಿತ್ತು , ಏನೋ
'ಅನಾಹುತ' ನನಗಾಗಿ ಕಾಯುತ್ತಿದೆ ಎಂದು.

'ರಕ್ಷಾ ಬಂಧನ'ವ ಕಟ್ಟಲು ನೀ ಬಂದೆಯಾ?
ಎಂದು ನಾ ಕೇಳುವಷ್ಟರಲ್ಲಿ , ನೀ
ಕಟ್ಟಿದ್ದೆ ನನಗೆ 'ಪ್ರೇಮ ಬಂಧನ'ವ.

'ಕ್ಯಾಂಡಲ್ ಲೈಟ್ ಡಿನ್ನರ್' ಗೆ ನನ್ನ ಆಹ್ವಾನಿಸಿ
ಲೈಟ್ ಆರಿಸಿ , ಕ್ಯಾಂಡಲ್ ನನ್ನ ಕೈಗಿಟ್ಟು
ಕಾಣದಂತೆ ಮಾಯವಾದವಳು ನೀನೆ ಅಲ್ವಾ!!

ಮತ್ತೆ ನೀ ಕಾಣಿಸಿದ್ದು ದೀಪಾವಳಿಯ ದಿನ
ದೀಪ ಹಿಡಿದು ನಿಂತ ಮುದ್ದು ಗೌರಿಯಂತೆ
ಪ್ರೀತಿಯಿಂದ ನೀ ಕೊಟ್ಟೆ ದೀಪಾವಳಿ ಉಡುಗೊರೆ
ತೆರೆದು ನೋಡಿದರೆ ಇತ್ತು ಅದರಲ್ಲಿ
ನಿನ್ನ 'ಮದುವೆಯ ಕರೆಯೋಲೆ '!!

-- ರಾಕೇಶ್ ಶೆಟ್ಟಿ Smiling

Thursday, October 23, 2008

ನಾನು ನನ್ನ ಪ್ರಿಯೆ

ನನ್ನ ಮನದ ಮನೆಯಲ್ಲಿ ನೀನೆ ಹಚ್ಚಿಟ್ಟ
ಪ್ರೀತಿಯ ದೀಪವ, ಕಾರಣ ಹೇಳದೆ ಏಕೆ ಆರಿಸಿ ಹೋದೆ ಗೆಳತಿ.
ನಮ್ಮ ಒಲವಿನ ದೋಣಿಯು ಬಿರುಗಾಳಿಗೆ ಸಿಕ್ಕಿದ್ದಾದರೂ ಹೇಗೆ.
ನೀ ಕೊಟ್ಟ ಪ್ರೀತಿಯ ಗುಲಾಬಿಯಲ್ಲಿ
ಮೋಸವೆಂಬ ಮುಳ್ಳನ್ನು ನಾ ನೋಡಲೇ ಇಲ್ಲ.

ಪ್ರೀತಿಯೆಂಬುದು '೨ ಹೃದಯಗಳ ವಿಷಯ' ಎಂದು ಹೇಳುತ್ತಾ
ನೀನು '೩ ನೆ ಹೃದಯ'ವ ಸದ್ದಿಲ್ಲದೆ ಹುಡುಕಿಕೊಂಡಿದ್ದೆ!
ಆಗ ನೆನಪಿಗೆ ಬಂದಿದ್ದು , ನೀನು ಯಾವಾಗಲು ಹೇಳುತ್ತಿದ್ದ ಮಾತು
" ಪ್ರಿಯ ನಮ್ಮ ಪ್ರೀತಿ 2 way " ಎಂದು.
ಆದರೆ ನಿನ್ನ ಇನ್ನೊಂದು way ನನಗೆ ತಿಳಿಯುವಷ್ಟರಲ್ಲಿ
ನಿನಗೆ ಮದುವೆಯಾಗಿ 2 ಮಕ್ಕಳು ಆಗಿದ್ದವು!!!!!


-- ರಾಕೇಶ್ ಶೆಟ್ಟಿ Smiling

ಪುಷ್ಪಕ ವಿಮಾನದ ಚೆಲುವೆ

ಮುಂಜಾನೆಯ ಮಂಜಿನಲಿ, ಚುಮು ಚುಮು ಚಳಿಯಲಿ
ಕುಳಿತಿದ್ದೆ ನಾ ಕಬ್ಬನ್ ಪಾರ್ಕಿನ ಬೆಂಚುಗಲ್ಲಿನ ಮೇಲೆ
ಹಕ್ಕಿಗಳ ಕಲರವದ ಗಾನ ಕಿವಿಯಲ್ಲಿ ಗುಯ್ಯ್ ಗುಡುತ್ತಿತ್ತು
ಆ ಚಿಲಿ ಪಿಲಿ ಗಾನದ ನಡುವೆಯೂ ಅದೆಂತದೋ ದಿವ್ಯ ಮೌನ

ತಂಗಾಳಿಯು ನನ್ನೆಡೆಗೆ ತೇಲಿ ಬಂದ ಅನುಭವ
ಕಣ್ಣೆತ್ತಿ ನೋಡಿದರೆ ಎದುರಿಗೆ ನಿಂತಿದ್ದಳು
ಮುಂಜಾನೆಯ ಮಂಜಿನಂತೆ ಕಂಗೊಳಿಸುತಿದ್ದಳು
ಚಂದ್ರನ ಕಂಡ ನೈದಿಲೆಯಂತೆ ಸಂತಸ ಮನದಲ್ಲಿ

ಅವಳ ಕಣ್ಣುಗಳ ಕಡಲಲ್ಲಿ ನಾ ತೇಲುತಿದ್ದರೆ
ಮೌನವೆ ಮಾತಾಗಿ, ಲೋಕ ಮರೆತೆ ಹೋಯಿತು
ಮೌನ ಸೀಳಿ ಮನದ ಮಾತ ಹೇಳಿದಳು ಅವಳು

'ಅನಿಸುತಿದೆ ಯಾಕೋ ಇಂದು' ಎಂದು ಹಾಡುತ್ತಾ
ನನ್ನ ಪಕ್ಕ ಬಂದು ಕುಳಿತು ನಕ್ಕಳು.
ಕುಳಿತವಳೇ 'ವಿಧಾನ ಸೌಧ'ದ ಗೋಪುರ
ತೋರಿಸಿ ಮುಗ್ದವಾಗಿ, ಪ್ರಿಯ ನನ್ನ ಅಲ್ಲಿಗೆ
ಕರೆದುಕೊಂಡು ಹೋಗುವೆಯ ಎಂದು ಕೇಳಿದಾಗ
'ಮುಂಗಾರು ಮಳೆ'ಯ ಆ ಮುಗ್ದ ಹುಡುಗೀ ನೀನೆ ಎಂದು
'ಕುಣಿದು ಕುಣಿದು ' ಬಾರೆ ಎಂದು ನಾ ಹಾಡುತ್ತಿರುವಾಗಲೇ
ಬಂದೆ ಬಿಟ್ಟಿತಲ್ಲ ನಿನ್ನ ಕರೆದೊಯ್ಯಲು ,
'ತವರು ಮನೆಯ ಪುಷ್ಪಕ ವಿಮಾನ' (ಹುಚ್ಚಾಸ್ಪತ್ರೆ ವಾಹನ)!!

- ರಾಕೇಶ್ ಶೆಟ್ಟಿ Smiling

ಹಾಟ್ಸ್ ಆಪ್ ಇಂಡಿಯಾ

ಇಂದು ಈ ಗೀತೆಯನ್ನು ಕೇಳುತಿದ್ದೆ. ಆಹಾ ಕೇಳಲು ಕರ್ಣಾನಂದ.
'ಹಂಸಲೇಖ' ಅವರ ಲೇಖನಿಯಿಂದ ಮೂಡಿಬಂದಿರುವ ಈ ಗೀತೆಯನ್ನೊಮ್ಮೆ ನೋಡಿ.
ಕವಿ ಮನಸಿನಲ್ಲಿ ಭವ್ಯ ಭಾರತದ ಚಿತ್ರಣ ಬಿಡಿಸಿಟ್ಟಿದ್ದಾರೆ ಹ್ಯಾಟ್ಸ್ ಆಪ್ ಟು ಹಂಸಲೇಖ.

"ಒಂದು ಬಾಣ ಪಕ್ಷಿಗೆ ತಾಕಿದರೆ
ರಾಮಾಯಣ ಕಾವ್ಯ ಹರಿಯುವುದು
ಒಂದು ಹೆಣ್ಣು ನೊಂದು ಕೂಗಿದರೆ
ಮಹಾಭಾರತ ಕಥನ ಕೇಳುವುದು
ಗಂಗಾ ಯಮುನಾ ತುಂಗಾ ಭದ್ರಾ...

ನದಿ ನದೆಗಳೇ ಇವಳಿಗೆ ನರ ನಾಡಿ
ಸಾಗರಗಳೇ ಇವಳಿಗೆ ಒಡನಾಡಿ
ಮಹಾ ವೀರರ, ಸಿಕ್ಖರ, ಸಿದ್ದರ , ಬುದ್ದರ
ಜನನಿ ಜನನಿ ನೀ

ಹಾಟ್ಸ್ ಆಪ್ ಇಂಡಿಯಾ ಹಾಟ್ಸ್ ಆಪ್ ಇಂಡಿಯಾ

ವಿಜಯೋತ್ಸವಕೆ ಬಂಗಾರದ ಮಳೆಗರೆದರು
ವಜ್ರ ವೈಡೂರ್ಯ ನಡು ಬೀದೀಲಿ ಚೆಲ್ಲಾಡಿದರು
ಗೆದ್ದವನಿಲ್ಲಿ ಸೋತವನ ಸನ್ಮಾನಿಸಿದ
ಗೊಮ್ಮಟನಾಗಿ ತ್ಯಾಗದಲ್ಲಿ ರಾರಾಜಿಸಿದ

ರಾಗ ಯೋಗ ನಾದ ವೇದ
ಧರೆಗೆ ತಂದರು ಸುಖಿಸಿ ಎಂದರು

ಇಲ್ಲಿ ಬಾಳಿನ ಚಿಂತೆ ಸಂತರದು
ಇಲ್ಲಿ ನಾಳಿನ ಚಿಂತೆ ದೇವರದು
ತುಂಡು ಬಟ್ಟೆಯ ತಾತನ ಉಪವಾಸ
ಘನ ಗುಲಾಮ ಗಿರಿಯ ಕಳೆಯುವುದೂ

ನಾದ ವೇದ ನಾಟ್ಯ ದೈವ
ಇಲ್ಲಿ ತೆಂಕಣವೆಲ್ಲ ದೈವ ಸ್ವರ
ಇಲ್ಲಿ ಬಡಗಣವೆಲ್ಲ ಧರ್ಮ ಸ್ವರ
ರಾಮ ಕೃಷ್ಣ ವಿವೇಕರ
ಸಂತರ ಸಿದ್ದರ ಜನನಿ ಜನನಿ ನೀ

ಹಾಟ್ಸ್ ಆಪ್ ಇಂಡಿಯಾ ಹಾಟ್ಸ್ ಆಪ್ ಇಂಡಿಯಾ "

-ರಾಕೇಶ್ ಶೆಟ್ಟಿ Smiling

ಮೋಹಿನಿ ಕಾಟ

'ಆಕಾಶವೇ ಬೀಳಲಿ ಮೇಲೆ' ಎಂದು ನಾ ಹಾಡುತಿದ್ದರೆ
'ನಾ ನಿನ್ನ ಮರೆಯಲಾರೆ' ಎಂದು ನೀ ಹಾಡುತಿದ್ದೆ ಅಂದು
ಆದರೆ ಇಂದು "ತಂಗಾಳಿಯಲ್ಲಿ ನಾನು ತೇಲಿ ಬಂದೆ " ಎಂದು
ನೀನು "ಮೋಹಿನಿ"ಯಾಗಿ ನನ್ನ ಏಕೆ ಕಾಡುತ್ತಿರುವೆ? ಸಿಂಧು
ಅಷ್ಟಕ್ಕೂ ನಿನಗೆ 'Drink N Drive' ಮಾಡಿ!
'ಸ್ವರ್ಗ' ಸೇರಲು ನಾ ಹೇಳಿದ್ದೆನಾ!!?

- ರಾಕೇಶ್ ಶೆಟ್ಟಿ Laughing out loud

ಹುಬ್ಬಳ್ಳಿ ಹುಡುಗಿ

'ಹುಬ್ಬಳ್ಳಿ' ಶಹರದಲ್ಲಿ , ದುರ್ಗದ ಬಯಲಲ್ಲಿ
ಕಂಡೆ ನಾ 'ಹೂ ಬಳ್ಳಿ' ಯಂತ ಬೆಡಗಿಯ
'ಚುರುಮುರಿ' ಅವಳ ಕೈಯಲ್ಲಿ, ರೋಜಾ ಹೂ ಜಡೆಯಲ್ಲಿ

ಮಾನಸ ಗಂಗೆಯಲ್ಲಿ ಮಿಂದ ಮಹಾರಾಣಿಯಂತೆ ಇದ್ದಳವಳು
ಮನವೆಂಬ ಮಾಯಾ ಮೃಗದ ಬೆನ್ನೇರಿ ಝೇಂಕಾರ ಮಾಡಿದಳು
ಪೂರ್ಣಿಮೆಯ ಚಂದ್ರನ ಕಂಡ ಸಮುದ್ರ ರಾಜನ ಹಾಗೆ
ಮನಸ್ಸೆಂಬ ಮಹಾ ಮರ್ಕಟ ಜಿಗಿದು ನರ್ತನ ಮಾಡಿತ್ತು

ಹೃದಯ ರಂಗೋಲಿಯಲ್ಲಿ ಮೂಡಿ ಬಂದ
ಚಂದದ ಚಿತ್ರ ಇವಳದೇ ಎನಿಸಿತು
ಸಪ್ತ ಸಾಗರ ದಾಟಿ ಬಂದ ಚೆಲುವೆಯಂತಿರುವ
ಅವಳ ಜೊತೆಯೇ ಸಪ್ತಪದಿ ತುಳಿಯುವ ಆಸೆ

ನನ್ನಾಸೆಯ ಅವಳಿಗೆ ಹೇಳಲೆಂದೇ ಹೆಜ್ಜೆಯಿಟ್ಟೆ
ಅಷ್ಟರಲ್ಲಿ ಅವಳೇ ನೋಡಿದಳು ನನ್ನ
ತಾಯಿಯ ಮುದ್ದು ಮುಖವ ನೋಡಿ
ಮೌನವಾಗುವ ಮಗುವಂತೆ ನಿಂತುಬಿಟ್ಟೆ

ನನ್ನ ಕಡೆ ತಿರುಗಿ ಮುದ್ದಾದ ಮಾತೊಂದ ಹೇಳಿದಳು
"ಚಲೋ ಅದಿಲೇ ನಂಗ್ ಬಾಳ್ ಹಿಡ್ಸಿ
ನನ್ ಕೂಡ ಮದ್ವಿ ಆಗ್ತಿಯೇನ "
ಬೆಪ್ಪಾಗಿ ನೋಡುತ್ತಲಿದ್ದೆ ಅವಳ
"ಹಿಂಗ್ಯಾಕೆ ನಾಚ್ಕೊತಿ,
ಮನ್ಯಾಗ್ ಬಂದ್ ಮಾತಡ್ಲೆನ" ಅಂದಳು

ಬಯಸಿ ಬರುತ್ತಿರುವ ಭಾಗ್ಯವ ನೆನೆದು
'ಓಕೆ' ಹೇಳ ಹೊರಟೆ ,ಅಷ್ಟರಲ್ಲಿ
ಗೆಳೆಯನ ದ್ವನಿ ಕೇಳಿತ್ತು
"ಕಚೇರಿಗೆ ಹೋಗೋ ಹೊತ್ತಾತು
ಕನಸ್ ಕಂಡಿದ್ದ್ ಸಾಕ್ ಏಳ್ಲೇ ಮಗನ!!"

- ರಾಕೇಶ್ ಶೆಟ್ಟಿ Smiling

ಆಗ ಕಾಶ್ಮೀರದಲ್ಲಿ ಅವರಿರಲಿಲ್ಲವಂತೆ

ಇತ್ತೀಚಿಗೆ 'ಕಾಶ್ಮೀರ'ಕ್ಕೆ ಸಂಬಂಧಿಸಿದಂತೆ 'ವಿಶ್ವ ಸಂಸ್ಥೆ'ಯಲ್ಲಿ ನಡೆದ ಒಂದು ಘಟನೆಯು ಈ-ಮೇಲ್ ನಲ್ಲಿ ಬಂದಿತ್ತು. ಅದನ್ನು ನಿಮ್ಮ ಮುಂದಿಡುತಿದ್ದೇನೆ.

ಭಾರತೀಯ ರಾಯಭಾರಿ ಭಾಷಣ ಶುರು ಮಾಡುತ್ತಾ ಹೀಗೆಂದರು
" ನಾನು ಕಾಶ್ಮೀರ ಸಮಸ್ಯೆಯ ಬಗ್ಗೆ ಮಾತನಾಡುವುದಕ್ಕಿಂತ ಮೊದಲು 'ಋಷಿ ಕಶ್ಯಪ'ರ ಬಗ್ಗೆ ಹೇಳಲಿಚ್ಛಿಸುತ್ತೇನೆ. ಅವರಿಂದಾಗಿಯೇ ಕಣಿವೆಗೆ 'ಕಾಶ್ಮೀರ' ಎಂಬ ಹೆಸರು ಬಂತು. ಒಮ್ಮೆ ಅವರು ಹೀಗೆ ಕಾಶ್ಮೀರ ಕಣಿವೆಯಲ್ಲಿ ಸಾಗುವಾಗ 'ಕಲ್ಲು ಬಂಡೆ'ಗಳ ನಡುವೆ ಹರಿಯುತಿದ್ದ ಜಲಧಾರೆಯನ್ನು ನೋಡಿ, ಸ್ನಾನ ಮಾಡುವ ಮನಸ್ಸಾಯಿತು. ಬಟ್ಟೆಯನ್ನು ಕಳಚಿ ಬಂಡೆಗಳ ಮೇಲಿಟ್ಟು 'ಕಶ್ಯಪ'ರು ಸ್ನಾನ ಮುಗಿಸಿ ನೋಡಿದರೆ, ಅವರು ಬಂಡೆಯ ಮೇಲಿಟ್ಟಿದ್ದ 'ಬಟ್ಟೆ'ಯನ್ನು 'ಪಾಕಿಸ್ತಾನಿ 'ಯೊಬ್ಬ ಕದ್ದೊಯ್ದಿದ್ದ ."

ಅವರು ಇಷ್ಟು ಹೇಳಿ ಮುಗಿಸುವಷ್ಟರಲ್ಲಿ 'ಪಾಕಿಸ್ತಾನಿ ರಾಯಭಾರಿ' ಕುಳಿತಲ್ಲಿಂದ ಜಿಗಿದೆದ್ದು ಹೇಳಿದ
"ನೀವು ಏನು ಮಾತಾಡ್ತಾ ಇದ್ದೀರಾ? ಆ ಕಾಲದಲ್ಲಿ 'ಪಾಕಿಸ್ತಾನಿ'ಗಳು 'ಕಾಶ್ಮೀರ'ದಲ್ಲಿ ಇರಲೇ ಇಲ್ಲ!! "

ನಸು ನಕ್ಕ ಭಾರತೀಯ ರಾಯಭಾರಿ, " ಎಲ್ಲರಿಗೂ ವಿಷಯವನ್ನು ಸ್ಪಷ್ಟಪಡಿಸಿರುವುದರಿಂದ ನಾನು ನನ್ನ ಮಾತನ್ನು ಮುಂದುವರೆಸುತ್ತೇನೆ"

ಆದರೆ ಈಗ ಅವರು ಹೇಳುತ್ತಾರೆ 'ಕಾಶ್ಮೀರ' ಅವರಿಗೆ ಸೇರಿದ್ದು ಎಂದು..

-- ರಾಕೇಶ್ ಶೆಟ್ಟಿ Smiling