ಸಪ್ತಪದಿ ತುಳಿಯಲು ಹೊರಟ
ಗೆಳತಿಯ ನೋಡಲು ಹೋಗಿದ್ದೆ
ನಾ ಸಪ್ತರ್ಷಿ ಕಲ್ಯಾಣ ಮಂದಿರಕ್ಕೆ
ಸಪ್ತ ಸ್ವರಗಳ ಹಿಮ್ಮೇಳ ಮೊಳಗುತಿದ್ದ
ಕಲ್ಯಾಣ ಮಂದಿರದೊಳಗೆ ಕಾಲಿಡುತಿದ್ದಂತೆ
'ಪನ್ನೀರ ಸ್ವಾಗತ' ಕೋರಲು ನಿಂತಿದ್ದ
ಅವಳ ನೋಡಿದೆ, ಆಹಾ! ಜಗತ್ ಸುಂದರಿಯವಳು
ನಾ ಕೊಟ್ಟ ನಗೆ ಮಲ್ಲಿಗೆಯ ಮುಡಿದವಳಿಗೆ
ಬೆಳ್ಳಿ ಕಾಲುಂಗುರವ ತೊಡಿಸಿ,ನನ್ನ
ಹೃದಯದ ಮನೆಗೆ ಸ್ವಾಗತಿಸಲೇ
ಪ್ರೀತಿಯ ಅರಮನೆಗೆ ಮಹಾರಾಣಿ ಮಾಡಲೇ
ಎಂದು ಮನದಲ್ಲಿ ಅಂದು ಕೊಂಡಾಗಲೇ
ಅವಳ ಪಕ್ಕ ನಿಂತಿದ್ದ ಮುದ್ದಾದ ಮಗು
ಹೇಳಿತು ಮುತ್ತಿನಂತ ಮಾತೊಂದು
"ಅಮ್ಮಾ, ಅಮ್ಮಾ ಅಂಕಲ್ಗೆ ನಾನು
ಪನ್ನೀರು ಹಾಕ್ತೀನಿ ಕೊಡಮ್ಮಾ!!! "
-- ರಾಕೇಶ್ ಶೆಟ್ಟಿ
No comments:
Post a Comment