Sunday, April 12, 2009

ಮಾತಿಗೊಮ್ಮೆ 'ಇಂಡಿಯಾ,ಇಂಡಿಯನ್ಸ್' ಅನ್ನುವ ಮೊದಲು


ಕೆಲವರಿರುತ್ತಾರೆ,ಅವರ ಕೈಯಲ್ಲಿ ಮಾಡಲಾಗದ ಕೆಲಸಕ್ಕೆಲ್ಲ ದೇಶವನ್ನೇ ಬೈಯ್ಯುವವರು, ನನ್ನ ಒಬ್ಬ ಗೆಳೆಯ ಇದ್ದಾನೆ, ಅವನಿಗೆ ಹೇಳಿದ ಟೈಮ್ಗೆ ಬರೋ ಅಭ್ಯಾಸನೆ ಇಲ್ಲ, ಕೇಳಿದ್ರೆ
"ನೋಡಮ್ಮ ,ನಾವ್ ಎಷ್ಟೇ ಆದ್ರೂ 'ಇಂಡಿಯನ್ಸ್' ನಾವ್ ಹಿಂಗೆ ಬರೋದು ಅಂತಾನೆ'.

ಮೊನ್ನೆ ಊಟಕ್ಕೆ ಅಂತ ನಮ್ಮ ಆಫಿಸ್ ಅತ್ರ ಇರೋ 'ನಿಸರ್ಗ' ಅನ್ನೋ ಹೋಟೆಲ್ಗೆ ಹೋದಾಗ, ನಾ ಕುಳಿತಿದ್ದ ಟೇಬಲ್ನಲ್ಲೆ ಇಬ್ಬರು ಮಹಾಶಯರು ಕುಳಿತಿದ್ದರು. ಅವರಲ್ಲೊಬ್ಬ ತನ್ನ ಕುಂಬಳಕಾಯಿಯಂತ ಹೊಟ್ಟೆಯ ಮೇಲೆ ಕೈಯಾಡಿಸುತ್ತಾ ಹೇಳಿದ,

'ನೀನ್ ಏನೇ ಹೇಳಮ್ಮ ನಮ್ಮ್ ದೇಶದಲ್ಲಿ ಶಾಲೆಯಲ್ಲಿ ಹೆಲ್ತ್ ಬಗ್ಗೆ ಓದಿಸೋದೆ ಇಲ್ಲ ನೋಡು',
ಅದಕ್ಕೆ ಮತ್ತೊಬ್ಬ 'ಹ್ಞೂ ಕಣೋ, ನಮ್ ದೇಶದಲ್ಲಿ ಮಾತ್ರ ಹಿಂಗೆ, ಬೇರೆ ದೇಶದಲ್ಲೆಲ್ಲ ಮಿಲಿಟರಿ ಟ್ರೈನಿಂಗ್ ಕಡ್ಡಾಯ ಮಾಡಿರ್ತಾರೆ, ಹಾಗಾದ್ರೂ ಇದ್ದಿದ್ರೆ ಹೆಂಗೋ ಒಳ್ಳೆ ಬಾಡಿ ಮೈನ್ಟೈನ್ ಮಾಡಬಹುದಿತ್ತು, ಅಲ್ವಾ?'
'ಹೌದು ಗುರು, ಎಷ್ಟಾದ್ರೂ ಇದು ಇಂಡಿಯಾ ಬಿಡು, ಇಲ್ಲಿ ಹಂಗೆಲ್ಲ ಆಗೋಲ್ಲ' ... ಹೀಗೆ ಮುಂದುವರೆದಿತ್ತು ಅವರ ಹರಟೆ.

ಅಲ್ಲ ಸ್ವಾಮೀ, ಆ ಪುಣ್ಯಾತ್ಮನಿಗೆ ಸರಿಯಾದ ಸಮಯಕ್ಕೆ ಬರಲಾಗುವುದಿಲ್ಲವಾದರೆ ಅದನ್ನು ದೇಶದ ಮೇಲೆ ಹೇಳುತ್ತಾನೆ, ಮತ್ತೊಬ್ಬ ಪುಣ್ಯಾತ್ಮ ಫಿಜ್ಜ,ಬರ್ಗರ್ ತಿಂದು ಕೊಬ್ಬು ಬೆಳೆಸಿಕೊಂಡು ಅದನ್ನು ದೇಶದ ತಲೆಗೆ ಕಟ್ಟುತ್ತಾನೆ!! ದೇಶವನ್ನು ಬೈಯ್ಯುವುದು ನಮಗೆ ಕಡ್ಲೆ ಪುರಿ ತಿಂದಷ್ಟೇ ಸುಲಭವಾಗಿ ಬಿಟ್ಟಿದೆ.

ನಾವ್ಯಾಕೆ ಹೀಗೆ ನಮ್ಮ ದೇಶದ ಬಗ್ಗೆಯೇ ನೆಗೆಟೀವ್ ಆಗಿ ಮಾತಾಡ್ತೀವಿ? ನಮಗೆ ಯಾಕೆ ದೇಶದ ಮೇಲೆ ಈ ಪರಿ ಸಿಟ್ಟು? ದೇಶದ ಮೇಲೆ ಇಷ್ಟೆಲ್ಲಾ ಮಾತಾಡುವ ಮೊದಲು,ನಾವೆಷ್ಟು ಸರಿಯಿದ್ದೇವೆ ಅಂತ ನಾವ್ಯಾಕೆ ಕೇಳಿಕೊಳ್ಳುವುದಿಲ್ಲ? ಈ ದೇಶ ಉದ್ದಾರ ಆಗೋಲ್ಲ, ಬದಲಾಗೊಲ್ಲ ಅನ್ನುವುದಕಿಂತ ಮೊದಲು, ನಾವು ಬದಲಾಗಬೇಕು, ನಾವು ಯೋಚಿಸುವ ರೀತಿ ಬದಲಾಗಬೇಕು, ಈ ದೇಶವನ್ನು ಮುನ್ನಡೆಸುತ್ತಿರುವ ನಾಯಕರು ಹಾಗು ಅವರ ಮನಸ್ತಿತಿ ಬದಲಾಗಬೇಕು.

ಇನ್ನೊಮ್ಮೆ 'ಇಂಡಿಯಾ,ಇಂಡಿಯನ್ಸ್' ಅನ್ನುವ ಮೊದಲು , ನಾವೆಷ್ಟು ಸರಿಯಿದ್ದೇವೆ ಅಂದು ಕೇಳಿಕೊಳ್ಳೋಣವೇ?

(ಚಿತ್ರ ಕೃಪೆ :http://www.goodcommitment.tv)

ರಾಕೇಶ್ ಶೆಟ್ಟಿ Smiling

No comments:

Post a Comment